ಚೀನಾದಲ್ಲಿ ಕಳಂಕಿತ ಉದ್ಯಮಿ ವಿಜಯ್ ಈಶ್ವರನ್ , ಸಿದ್ದರಾಮಯ್ಯ ಭೇಟಿ- ಸಂಬೀತ್ ಪಾತ್ರ ಆರೋಪ

2013 ರಲ್ಲಿ ಸಿದ್ದರಾಮಯ್ಯ ಚೀನಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಳಂಕಿತ ಉದ್ಯಮಿ ವಿಜಯ್ ಈಶ್ವರನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಹಿಂದಿನ ಉದ್ದೇಶ ಏನಿತ್ತು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಆರೋಪಿಸಿದ್ದಾರೆ.
ಸಂಬೀತ್ ಪಾತ್ರ ಅವರಿಂದ ಪೋಟೋ ಬಿಡುಗಡೆಯ ಚಿತ್ರ
ಸಂಬೀತ್ ಪಾತ್ರ ಅವರಿಂದ ಪೋಟೋ ಬಿಡುಗಡೆಯ ಚಿತ್ರ
Updated on

ಬೆಂಗಳೂರು : 2013 ರಲ್ಲಿ ಸಿದ್ದರಾಮಯ್ಯ ಚೀನಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಳಂಕಿತ ಉದ್ಯಮಿ ವಿಜಯ್ ಈಶ್ವರನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಹಿಂದಿನ ಉದ್ದೇಶ  ಏನಿತ್ತು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಆರೋಪಿಸಿದ್ದಾರೆ.

ಸಿದ್ದರಾಮಯ್ಯ , ವಿಜಯ್ ಈಶ್ವರನ್ ಜೊತೆಗಿರುವ  ಪೋಟೋವೊಂದನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಸಂಬೀತ್ ಪಾತ್ರ, ವಿಜಯ್ ಈಶ್ವರನ್  ದೇಶದಿಂದ ತಲೆ ಮರೆಸಿಕೊಂಡಿದ್ದಾನೆ .ಅವರೊಂದಿಗೆ ಮತ್ತೊಬ್ಬ ಕಳಂಕಿತ ಉದ್ಯಮಿಯಿದ್ದು, ಅವರಿಬ್ಬರು ದೇಶಭ್ರಷ್ಟ ಎಂದು ಪರಿಗಣಿಸಲಾಗಿದೆ . ಅವರನ್ನು ಏಕೆ ಸಿದ್ದರಾಮಯ್ಯ ಭೇಟಿ ಮಾಡಿದ್ದರು ಎಂದು ಪ್ರಶ್ನಿಸಿದರು.

ಈ ಸಂಬಂಧ ಈ ತಿಂಗಳ 2 ರಂದು ದೂರು ದಾಖಲಿಸಲಾಗಿದೆ. ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ತೊಡಗಿರುವುದು ಇದರಿಂದ ಬೆಳಕಿಗೆ ಬರಲಿದೆ ಎಂದು ಸಂಬೀತ್ ಪಾತ್ರ ಹೇಳಿದ್ದಾರೆ.

 ಬಿಜೆಪಿಯ ಈ ಆರೋಪಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಜಯ್ ಈಶ್ವರನ್ ಯಾರು ಅಂತಾನೇ ಗೊತ್ತಿಲ್ಲ ಎಂದು ಹೇಳಿದರು.




Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com