ಪ್ರಚಾರದ ಅಂಗವಾಗಿಯೇ ಟೆಂಪಲ್ ನಡೆಸಿದ ರಾಹುಲ್ ಗಾಂಧಿ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನ, ನ್ಯೂ ತಿಪ್ಪಸಂದ್ರದ ವೀರಾಂಜನೇಯ ಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಕಾಟನ್ ಪೇಟೆಯ ಮಸೀದಿಗೂ ಭೇಟಿ ನೀಡಿ, ಸಂಜೆ ಡಾ.ರಾಜ್ ಕುಮಾರ್ ಸಮಾಧಿಗೆ ತೆರಳಿ ನಮನ ಸಲ್ಲಿಸಿದರು. ಪ್ರಚಾರುದುದ್ದಕ್ಕೂ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ತೀವ್ರವಾಗಿ ಕಿಡಿಕಾರಿದರು.