ಜೆಡಿಎಸ್ ಶಾಸಕರು ತಂಗಿರುವ ಲಿ ಮೆರಿಡಿಯನ್ ಹೋಟೆಲ್ನಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆ ಕುರಿತು ಯಾವುದೇ ಊಹಾಪೋಹಗಳಿಗೂ ಆಸ್ಪದವಿಲ್ಲ. ಸಚಿವ ಸ್ಥಾನ ಹಂಚಿಕೆ ಬಗ್ಗೆ ಈಗಾಗಲೇ ಮಾತುಕತೆಯಾಗಿದೆ ಎಂದು ಹೇಳಿದರು. ಅಂತೆಯೇ ತಮಗೆ ಮಂತ್ರಿ ಸ್ಥಾನ ದೊರೆಯುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಪುಟ್ಟರಾಜು ಅವರು, ತಮಗೆ ಪಕ್ಷ ಯಾವುದೇ ಸ್ಥಾನ ನೀಡಿದರೂ ನಿಭಾಯಿಸುತ್ತೇನೆ. ಮಂಡ್ಯ ಉಸ್ತುವಾರಿ ನೀಡುವ ಕುರಿತು ಚರ್ಚೆಯಾಗಿದೆ. ಈ ಸಂಬಂಧ ವರಿಷ್ಠರೂ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಪುಟ್ಟರಾಜು ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.