ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಕೆಲವೇ ಸಚಿವ ಸ್ಥಾನ ಭರ್ತಿ ಮಾಡಿ, ಬಾಕಿಯಿರುವುದನ್ನು ಹಾಗೆಯೇ ಉಳಿಸಿಕೊಳ್ಳಲು ಯೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಮುಂದಿನ ಎರಡು-ಮೂರು ತಿಂಗಳಲ್ಲಿ ಕಮಲ ಪಕ್ಷದಲ್ಲಿನ ಕೆಲ ಶಾಸಕರನ್ನು ಮೈತ್ರಿ ಸರ್ಕಾರದ ಪರ ಸೆಳೆಯಲು ತಂತ್ರಗಾರಿಕೆ ರೂಪಿಸಲಾಗಿದೆ. ಮೈತ್ರಿ ಸರ್ಕಾರಕ್ಕೆ ಒಪ್ಪಿಗೆ ಸೂಚಿಸುವ ಬಿಜೆಪಿ ಶಾಸಕರಿಗೆ ಉಪ ಚುನಾವಣೆಯನ್ನು ನಡೆಸಿ, ಅವರನ್ನೇ ಮತ್ತೆ ಆಯ್ಕೆಗೊಳಿಸಿ ಸಚಿವ ಸ್ಥಾನ ಭರ್ತಿ ಮಾಡೋಣ ಎಂದು ಉಭಯ ನಾಯಕರುಗಳು ಮಾಸ್ಟರ್ ಪ್ಲಾನ್ ಹಾಕಿದ್ದಾರೆ.