ವಿಧಾನಸಭೆಯಲ್ಲಿ ಮಾತನಾಡಿರುವಅವರು, 1994ರಿಂದ 1999ರವರೆಗೆ 5 ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ಸಭಾಧ್ಯಕ್ಷರಾಗಿ ನೀವು ಕಾರ್ಯನಿರ್ವಹಿಸಿದ್ದನ್ನು ನಾವು ನೋಡಿದ್ದೇವೆ. ನಿಮ್ಮಂತಹ ಹಿರಿಯರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂಬ ಕಾರಣಕ್ಕೆ ಹಾಗೂ ಗೌರವ ನೀಡಿರುವ ಸಲುವಾಗಿ ಸುರೇಶ್ ಕುಮಾರ್ ಅವರು ಸಲ್ಲಿಸಿದ್ದ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಸೂಚಿಸಿ, ನಿಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದೆವು ಎಂದು ಹೇಳಿದ್ದಾರೆ.