ಇದೇ ವೇಳೆ ಡಿಕೆ ಸಹೋದರರೇ ಚಂದ್ರಶೇಖರ್ ಅವರನ್ನು ಬಿಜೆಪಿಗೆ ಕಳುಹಿಸಿ ಮತ್ತೆ ವಾಪಸ್ ಕರೆಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಹಳ ಸಂತೋಷ.. ನಮ್ಮ ಮಾತು ಕೇಳಿ ಬಿಜೆಪಿಯಲ್ಲೂ ಟಿಕೆಟ್ ನೀಡುತ್ತಾರೆ ಎಂಬುದು ಖುಷಿ. ಬಿಜೆಪಿಯಲ್ಲೂ ನಮ್ಮ ನಾಣ್ಯ ನಡೆಯುತ್ತದೆಯಲ್ಲ ಎಂದು ವ್ಯಂಗ್ಯವಾಡಿದರು. ಅಂತೆಯೇ ಬಿಎಸ್ ವೈ ಆರೋಪಕ್ಕೆ ತಿರುಗೇಟು ನೀಡಿದ ಸುರೇಶ್, ಬಿಜೆಪಿಯವರ ನಡವಳಿಕೆ, ಹುಸಿ ಭರವಸೆ ನೀಡಿ ಸುಳ್ಳು ಹೇಳಿ ಚುನಾವಣೆ ನಡೆಸುವ ಅಭ್ಯಾಸಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.