'ನನ್ನನ್ನು ಕೆಣಕಿದ ತ್ರಿಮೂರ್ತಿಗಳು ಈಗ ಬೆತ್ತಲಾಗಿದ್ದಾರೆ- ಎಚ್. ಡಿ.ಕುಮಾರಸ್ವಾಮಿ

ಬಿಜೆಪಿಯ ತ್ರಿಮೂತ್ರಿಗಳು ನನ್ನನ್ನು ಕೆಣಕಿ ಈಗ ಬೆತ್ತಲಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಬಿಜೆಪಿಯ ತ್ರಿಮೂತ್ರಿಗಳು ನನ್ನನ್ನು ಕೆಣಕಿ ಈಗ ಬೆತ್ತಲಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಬಿಎಸ್ ವೈ, ಶೆಟ್ಟರ್, ಈಶ್ವರಪ್ಪ ಈ ತ್ರಿಮೂರ್ತಿಗಳು ನನ್ನ ಅಡ್ರೆಸ್ನಲ್ಲಿ ನಿಂತಿದ್ದರು. ನನ್ನನ್ನು ಕೆಣಕಿ ಈಗ ಇವರು ಬೆತ್ತಲಾಗಿದ್ದಾರೆ ಎಂದಿದ್ದಾರೆ.

ಮರೆವು ರೋಗ ಬಂದವರಿಗೆಲ್ಲ ಶೀಘ್ರವೇ  ನಮ್ಮ ಜನ ನನ್ನ ಅಡ್ರೆಸ್ ತೋರಿಸುತ್ತಾರೆ. ಇದು ಅಹಂ ಅಲ್ಲ.. ನನ್ನ ಜನ ನನಗೆ ಕೊಟ್ಟ ಬಲ ಎಂದು ಅವರು ಹೇಳಿದ್ದಾರೆ.

ಉಪ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಬಿಜೆಪಿ ನಾಯಕರು ನನ್ನ ಅಡ್ರೆಸ್ ಹುಡುಕುತ್ತಿದ್ದಾರೆ. ನನ್ನ ಅಡ್ರಸ್ ಕೇಳಿದ ಬಿಎಸ್ ಯಡಿಯೂರಪ್ಪ ಸೂಕ್ತ ಉತ್ತರ ಪಡೆದುಕೊಂಡರು. ಈಗ ದೊಡ್ಡ ದೊಡ್ಡ ನಾಯಕರ ಮೂಲಕ ನನ್ನ ಅಡ್ರೆಸ್ ಕೇಳಿಸುತ್ತಿದ್ದಾರೆ. ಅವರಿಗೆಲ್ಲ ಉತ್ತರಿಸುವಷ್ಟು ದೊಡ್ಡವನಲ್ಲಿದ್ದರೂ ನಾನೇ ಉತ್ತರಿಸುವೆ ಅಂದಿದ್ದಾರೆ.

ಹಾಸನದ ಹರದನಹಳ್ಳಿಯ ದೇವೇಗೌಡರ ಮಗ ಕುಮಾರಸ್ವಾಮಿ. ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ನನ್ನ ಶಾಶ್ವತ ವಿಳಾಸ ಎಂದು ಅವರು ಟ್ವೀಟರ್ ನಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com