ಚಾಮುಂಡಿಯ ಪುಣ್ಯಕ್ಷೇತ್ರವನ್ನು ಅಪವಿತ್ರಗೊಳಿಸಬೇಡಿ, ನಿಮ್ಮ ಯೋಗ್ಯತೆ ಸಾಬೀತುಪಡಿಸಿ: ದಿನೇಶ್ ಗುಂಡೂರಾವ್

ಜೆಡಿಎಸ್ ಅನರ್ಹ ಶಾಸಕ ಎಚ್ . ವಿಶ್ವನಾಥ್ ಹಾಗೂ  ಶಾಸಕ ಸಾರಾ ಮಹೇಶ್ ನಡುವಿನ ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿರುವಂತೆ  ನಾಡ  ದೇವತೆ ತಾಯಿ ಚಾಮುಂಡೇಶ್ವರಿ ದೇಗುಲದ ಬಳಿ ಆಣೆ ಪ್ರಮಾಣ ಮಾಡುವಂತೆ ಪರಸ್ಪರ ಸವಾಲ್ ಹಾಕಿದ್ದಾರೆ.
ಎಚ್. ವಿಶ್ವನಾಥ್, ದಿನೇಶ್ ಗುಂಡೂರಾವ್
ಎಚ್. ವಿಶ್ವನಾಥ್, ದಿನೇಶ್ ಗುಂಡೂರಾವ್

ಬೆಂಗಳೂರು: ಜೆಡಿಎಸ್ ಅನರ್ಹ ಶಾಸಕ ಎಚ್. ವಿಶ್ವನಾಥ್ ಹಾಗೂ  ಶಾಸಕ ಸಾರಾ ಮಹೇಶ್ ನಡುವಿನ ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿರುವಂತೆ  ನಾಡ  ದೇವತೆ ತಾಯಿ ಚಾಮುಂಡೇಶ್ವರಿ ದೇಗುಲದ ಬಳಿ ಆಣೆ ಪ್ರಮಾಣ ಮಾಡುವಂತೆ ಪರಸ್ಪರ ಸವಾಲ್ ಹಾಕಿದ್ದಾರೆ.

ಈ ಸಂಬಂಧ ಟ್ವಿಟರ್ ನಲ್ಲಿ  ಹೆಚ್ ವಿಶ್ವನಾಥ್ ವಿರುದ್ಧ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನೀವೆಷ್ಟು ಪ್ರಾಮಾಣಿಕರು, ಯೋಗ್ಯರು ಎಂಬುದು ರಾಜ್ಯಕ್ಕೆ ತಿಳಿದಿದೆ.ಚಾಮುಂಡಿಯ ಪುಣ್ಯಕ್ಷೇತ್ರವನ್ನು ನಿಮ್ಮ ಆಣೆ ಪ್ರಮಾಣದ ರಾಜಕೀಯ ದೊಂಬರಾಟದ ಅಖಾಡ ಮಾಡಿಕೊಂಡು ಅಪವಿತ್ರ ಗೊಳಿಸಬೇಡಿ,ಮುಂದೆ ಚುನಾವಣೆಗಳು ಬರುತ್ತಿವೆ, ಜನತಾ ನ್ಯಾಯಾಲಯದ ಮುಂದೆ ನಿಮ್ಮ ಯೋಗ್ಯತೆ ಸಾಬೀತು ಪಡಿಸಿ ಎಂದಿದ್ದಾರೆ.

ಹೆಚ್.ವಿಶ್ವನಾಥ್  ತಮ್ಮ ಸ್ವಾರ್ಥ, ಅಧಿಕಾರದ ಆಸೆಗೆ ಕಮಲ ಹಿಡಿಯಲು ಹೋಗಿ ನಿಂತಿದ್ದಾರೆ.ರಾಜಕೀಯ ಕ್ಷೇತ್ರದಲ್ಲಿ ಉತ್ತಮ ವ್ಯಕ್ತಿತ್ವ ಕಾಪಾಡಿಕೊಳ್ಳಲು ನೀವು ಆ ಕೆಸರಿಂದ ದೂರ ಉಳಿಯುವುದೇ ಲೇಸು.ಕೆಸರೆರಚಾಟ ಮಾಡುವವರನ್ನು ನಿರ್ಲಕ್ಷಿಸಿರಿ ಮುನ್ನಡೆಯಿರಿ, ಮುಂದಿನದು ಜನತೆಗೆ ತೀರ್ಮಾನಿಸಲು ಬಿಡಿ ಎಂದು ಸಾರಾ ಮಹೇಶ್ ಅವರಿಗೆ  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com