ತುಮಕೂರು: ಉಪಚುನಾವಣೆಗೆ ದಿನಗಣನೆ ಆರಂಭವಾಗಿರುವ ನಡುವಲ್ಲೇ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಪ್ರಮುಖ ಮೂರು ರಾಜಕೀಯ ಪಕ್ಷಗಳ ನಾಯಕರು ಅಬ್ಬರ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ನವೆಂಬರ್ 3 ರಂದು ಶಿರಾ ಹಾಗೂ ರಾಜರಾಜೇಶ್ವರಿ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಚುನಾವಣೆ ಯಲ್ಲಿ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ 13 ಸ್ವತಂತ್ರಯ ಅಭ್ಯರ್ಥಿಗಳ ಕಣಕ್ಕಿಳಿದಿದ್ದು, ಎರಡೂ ಕ್ಷೇತ್ರಗಳಲ್ಲೂ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಮದಕ್ಕನಹಳ್ಳಿಗೆ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಭೇಟಿ ನೀಡಿದ್ದು, ಈ ವೇಳೆ ಭೋವಿ ಸಮುದಾಯದ ಸದಸ್ಯರು ಸೇಬು ಹಾರವನ್ನು ಹಾಕುವ ಮೂಲಕ ಭರ್ಜರಿ ಸ್ವಾಗತಿಸಿದರು.
ಈ ವೇಳೆ ಮಾತನಾಡಿರುವ ಕಟೀಲ್ ಅವರು, ಶಿರಾದಲ್ಲಿ ಬಿಜೆಪಿ ಖಾತೆ ತೆರಯಲು ಅವಕಾಶ ಸಹಾಯ ಮಾಡುವಂತೆ ನಿಮ್ಮ ಬಳಿ ಬೇಡಿಕೊಳ್ಳುತ್ತಿದ್ದೇನೆಂದು ಹೇಳಿದ್ದಾರೆ.
ಈ ನಡುವೆ ಕಾಂಗ್ರೆಸ್ ಕೂಡ ನಿನ್ನೆ ಪ್ರಚಾರ ನಡೆಸಿದ್ದು, ಬಲಿಜ ಸಮುದಾಯದ ನಾಯಕ ಆರ್'ವಿ ದೇವರಾಜ್ ಹಾಗೂ ಲಿಂಗಾಯತರ ನಾಯಕ ಮುಖ್ಯಮಂತ್ರಿ ಚಂದ್ರು ಅವರೊಂದಿಗೆ ಪ್ರಚಾರ ನಡೆಸಿತು.
ಈ ನಡುವೆ ಜೆಡಿಎಸ್ ಪಕ್ಷದ ಎಲ್ಲಾ ನಾಯಕರೂ ಪರಿಣಾಮಕಾರಿಯಾಗಿ ಶಿರಾದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ವೇಳೆ ಮಾತನಾಡಿರುವ ದೇವೇಗೌಡ ಅವರು, ಜೆಡಿಎಸ್ ಚಿತಾಭಸ್ಮದಿಂದ ಮೇಲೇಳಲಿದೆ ಎಂದಿದ್ದಾರೆ.
Advertisement