ಬೆಂಗಳೂರು: ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಕಾರ್ಪೋರೇಷನ್ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಪಕ್ಷ ಉಸ್ತುವಾರಿಗಳನ್ನು ನೇಮಕ ಮಾಡಿದ್ದು, ಪ್ರತೀ ಜಿಲ್ಲೆಗೆ ತಲಾ 3 ನಾಯಕರಿಗೆ ಜವಾಬ್ದಾರಿ ನೀಡಿದೆ.
ಹುಬ್ಬಳ್ಳಿ-ಧಾರವಾಡಕ್ಕೆ ಶಂಕರ್ ಪಾಟೀಲ್ ಮುನೇನಕೊಪ್ಪ, ಲಕ್ಷ್ಮಣ್ ಸವದಿ ಮತ್ತು ಮಹೇಶ್ ತೆಂಗಿನಕಾಯಿ ಅವರಿಗೆ ಜವಾಬ್ದಾರಿ ನೀಡಿದ್ದು, ಬೆಳಗಾವಿಯಲ್ಲಿ ಗೋವಿಂದ್ ಕಾರಜೋಳ, ಸತೀಶ್ ರೆಡ್ಡಿ ಮತ್ತು ಅಭಯ್ ಪಾಟೀಲ್ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.
ಅಂತೆಯೇ ಕಲಬುರಗಿಗೆ ಮುರುಗೇಶ್ ನಿರಾಣಿ, ಎನ್ ರವಿಕುಮಾರ್ ಮತ್ತು ದತ್ತಾತ್ರೆಯೇ ಪಾಟೀಲ್ ರೇವೂರ್ ರಿಗೆ ಉಸ್ತುವಾರಿ ನೀಡಲಾಗಿದೆ.
ಇವರ ಜೊತೆಗೇ ಆಯಾ ಕ್ಷೇತ್ರದ ಸಂಸದರು, ಶಾಸಕರು ಮತ್ತು ಸ್ಥಳೀಯ ಮುಖಂಡರು ಚುನಾವಣಾ ತಂಡಗಳಲ್ಲಿರುತ್ತಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
Advertisement