ಉಪಚುನಾವಣೆಯಲ್ಲಿ 'ಕೈ' ಹಿಡಿದ ಅಹಿಂದ: ಹಾನಗಲ್ ಗೆಲುವಿನ ಕ್ರೆಡಿಟ್ ಪಡೆಯಲು 'ಟಗರು' ಮುಂದು; ಎಐಸಿಸಿಗೆ ಸಿದ್ದರಾಮಯ್ಯ ಸಂದೇಶ?

ಇತ್ತೀಚೆಗೆ ನಡೆದ ಹಾನಗಲ್ ಮತ್ತು ಸಿಂದಗಿ ವಿಧಾನ ಸಭೆ ಉಪಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸಿದ್ದರು. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಇತ್ತೀಚೆಗೆ ನಡೆದ ಹಾನಗಲ್ ಮತ್ತು ಸಿಂದಗಿ ವಿಧಾನ ಸಭೆ ಉಪಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸಿದ್ದರು.  ಉಪಚುನಾವಣೆ ಫಲಿತಾಂಶವನ್ನು ತನ್ನ ಪರವಾಗಿ ಬಿಂಬಿಸುವ ಮೂಲಕ ಪಕ್ಷದ ಹೈಕಮಾಂಡ್‌ಗೆ  ತಾನು "ಪ್ರಶ್ನಾತೀತ" ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ) ನಾಯಕ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.

ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ವಿ ಮಾನೆ ಗೆಲುವು ಸಾಧಿಸಿದರೆ, ಸಿಂದಗಿಯಲ್ಲಿ ಬಿಜೆಪಿಯ ರಮೇಶ ಭೂಸನೂರ ಜಯಗಳಿಸಿದ್ದಾರೆ.  ಮೂಲಗಳ ಪ್ರಕಾರ, ಉಪಚುನಾವಣೆಗೆ ಮೂರು ವಾರಗಳ ಮೊದಲು ಸಿದ್ದರಾಮಯ್ಯ  ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು ಹಾಗೂ ಪಕ್ಷವನ್ನು ಗೆಲ್ಲಿಸುವ ಭರವಸೆ ನೀಡಿದ್ದರು.

ವಿಶೇಷವಾಗಿ ಹಾನಗಲ್‌ನಲ್ಲಿ, ತಮ್ಮ ಆಯ್ಕೆಯ ಅಭ್ಯರ್ಥಿ ಮಾನೆ ಅವರನ್ನು ಕಣಕ್ಕಿಳಿಸಿದರೇ ಗೆಲುವು ಖಚಿತ ಎಂದು ಭರವಸೆ ನೀಡಿದ್ದರು, "ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಸೇರಿದಂತೆ ವಿವಿಧ ಅಂಶಗಳ ಕಾಂಗ್ರೆಸ್‌ಗೆ ಸಹಾಯ ಮಾಡುತ್ತದೆ ಎಂಬ ವಿಶ್ವಾಸ ಹೊಂದಿದ್ದರು ಎಂದು ಪಕ್ಷದ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.

ನವೆಂಬರ್ 2 ರಂದು ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಕೂಡಲೇ ಹಾನಗಲ್ ಕ್ಷೇತ್ರದ ಫಲಿತಾಂಶದ ಲಾಭ ಪಡೆಯಲು ಸಿದ್ದರಾಮಯ್ಯ ತರಾತುರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರಿಗೆ ಕರೆ ಮಾಡಿದ್ದರು, ಬೇರೆಲ್ಲಾ ರಾಜಕೀಯ ಬೆಳವಣಿಗೆಗಳನ್ನು ಪಕ್ಕಕ್ಕೆ ಸರಿಸಿ ಫಲಿತಾಂಶದ ಬಗ್ಗೆ ಚರ್ಚಿಸಿದ್ದರು.

ಸಿದ್ದರಾಮಯ್ಯ ಅವರು ತೀವ್ರ ಪ್ರಚಾರ ನಡೆಸಿದ ಹಾನಗಲ್‌ನಲ್ಲಿ ಹಿಂದುಳಿದ ವರ್ಗಗಳು, ಎಸ್‌ಸಿ, ಎಸ್‌ಟಿ ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಈ ಸಂದೇಶವನ್ನು ಅವರು ಸುರ್ಜೇವಾಲಾ ಮೂಲಕ ಹೈಕಮಾಂಡ್‌ಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದರ ಲಾಭ ಪಡೆಯಲು ಮುಂದಾದ ಬಿಜೆಪಿ, ಸಿದ್ದರಾಮಯ್ಯ ಅವರನ್ನು ಅವಕಾಶವಾದಿ ಎಂದು ಟೀಕಿಸಿತು. ಒಂದು ದಿನದ ನಂತರ, ಪಕ್ಷದ ಎಸ್‌ಸಿ ವಿಭಾಗವು ದಲಿತರ  ಬಗ್ಗೆ ಅವರ ಸಿದ್ದರಾಮಯಯ ಅವರು ಮಾಡಿದ್ದ ಟೀಕೆಗಳಿಗಾಗಿ ಕರ್ನಾಟಕದಾದ್ಯಂತ ಆಂದೋಲನಗಳನ್ನು ನಡೆಸಿತು.

ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್‌ಗಳಲ್ಲಿ, ತಾವು  ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಸ್‌ಸಿಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾಗಿ ಹೇಳಿದರು.  "ಎಸ್‌ಸಿ/ಎಸ್‌ಟಿ ಉದ್ಯಮಿಗಳಿಗೆ ಶೇ.4ರ ಬಡ್ಡಿಯಲ್ಲಿ 10 ಕೋಟಿ ರೂ.ವರೆಗೆ ಸಾಲ ನೀಡಲಾಗಿದೆ. 908 ಕೋಟಿ ರೂ.ಗಳ ಸಾಲ ನೀಡಲಾಗಿದ್ದು, 1,597 ಉದ್ಯಮಿಗಳಿಗೆ ಲಾಭವಾಗಿದೆ. ಇದು ನಮ್ಮ ಸಾಧನೆ. ಬಿಜೆಪಿಯದ್ದೇನು?" ಎಂದು ಪ್ರಶ್ನಿಸಿದರು.

2013ರ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಅಹಿಂದ ಸಮಾವೇಶಗಳು ಸಿದ್ದರಾಮಯ್ಯನವರನ್ನು ಜನಸಾಮಾನ್ಯರ ನಾಯಕ ಎಂದು ಬಿಂಬಿಸಲಾಯಿತು, ಇದರಿಂದ ಸಿಎಂ ಕುರ್ಚಿಯನ್ನು ಏರಲು ನೆರವಾದುದನ್ನು ಇಲ್ಲಿ ಸ್ಮರಿಸಬಹುದು.

ಆದರೆ ಕೊರಟಗೆರೆಯಿಂದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಸೋಲಿಗೆ ಅವರು ಶ್ರಮಿಸಿದ್ದಾರೆ ಮತ್ತು ವಿ ಶ್ರೀನಿವಾಸ ಪ್ರಸಾದ್ ಅವರನ್ನು ಅವರ ಸಂಪುಟದಿಂದ ತೆಗೆದುಹಾಕಿದ್ದು ದಲಿತ ವರ್ಗದ ಆಕ್ರೋಶಕ್ಕೆ ಕಾರಣವಾಯಿತು.

ಇದಕ್ಕಾಗಿ 2018ರಲ್ಲಿ ಚಾಮುಂಡೇಶ್ವರಿಯಿಂದ  ಸಿದ್ದರಾಮಯ್ಯ ಅದಕ್ಕೆ ಬೆಲೆ ತೆತ್ತರು. ಬಾದಾಮಿಯಲ್ಲಿ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಬಾದಾಮಿಯಲ್ಲಿ ಅವರ ಗೆಲ್ಲಲು ಸಹಾಯ ಮಾಡಿದ್ದು ಕೇವಲ ಕುರುಬರು ಮಾತ್ರವಲ್ಲ, ಅತ್ಯಂತ ಹಿಂದುಳಿದ ಸಮುದಾಯಗಳು (ಎಂಬಿಸಿಗಳು) , ಆದರೆ ಅವರು ಸಿಎಂ ಆಗಿದ್ದಾಗ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೆ ಅವರನ್ನು ನಿರಾಸೆಗೊಳಿಸಿದ್ದಾರೆ," ಎಂದು ಅಹಿಂದ ಮುಖಂಡರೊಬ್ಬರು ಆರೋಪಿಸಿದ್ದಾರೆ.

ತೀರಾ ಹಿಂದುಳಿದ ಸಮುದಾಯದ ಮಹತ್ವ ಅರಿತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, 2023ರ ವಿಧಾನ ಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು, ಹಿಂದಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕನಾಥ್ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com