ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ? ಬಿಜೆಪಿ ಟೀಕೆ

ಧರ್ಮ ಹಾಗೂ ಜಾತಿ ಕುರಿತಂತೆ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಗಳನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ.ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ? ಎಂದು ಬಿಜೆಪಿ ಟ್ವೀಟರ್ ನಲ್ಲಿ ಪ್ರಶ್ನಿಸಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಧರ್ಮ ಹಾಗೂ ಜಾತಿ ಕುರಿತಂತೆ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಗಳನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ.
ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ? ಎಂದು ಬಿಜೆಪಿ ಟ್ವೀಟರ್ ನಲ್ಲಿ ಪ್ರಶ್ನಿಸಿದೆ.

ತಲೆಗೆ ಟೋಪಿ ಹಾಕಿದಾಗ ಅಲ್ಪಸಂಖ್ಯಾತ, ಕಂಬಳಿ ಹೊದ್ದುಕೊಂಡರೆ ಒಂದು ಜಾತಿ, ಚುನಾವಣೆ ಬಂದಾಗ ನಾನೂ ಹಿಂದು, ಮುಖ್ಯಮಂತ್ರಿಯಾಗುವ ಆಸೆ ಬಂದಾಗ ದಲಿತ, ಅಧಿಕಾರಕ್ಕಾಗಿ ಎಷ್ಟೊಂದು ವೇಷ, ನಾಟಕ, ಕಪಟ ವೇಷಧಾರಿ ಎಂದು ಟೀಕೆಗಳ ಸುರಿಮಳೆಗೈಯಲಾಗಿದೆ. 

ಮತ್ತೊಂದು ಟ್ವೀಟ್ ನಲ್ಲಿ ಸಿದ್ದರಾಮಯ್ಯ ಜೆಡಿಎಸ್ ಕಟ್ಟಿದರಾ? ಕಾಂಗ್ರೆಸ್ ಕಟ್ಟಿದರಾ? ರಾಜ್ಯ ಕಟ್ಟಿದರಾ?ಎಂದು ಪ್ರಶ್ನಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com