ಅಮಿತ್ ಶಾ
ಅಮಿತ್ ಶಾ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಗಲಭೆಗೆ ಕಾರಣವಾಗಲಿದೆ: ಅಮಿತ್ ಶಾ

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ವಂಶಾಡಳಿತ ರಾಜಕೀಯ ಉತ್ತುಂಗಕ್ಕೇರಲಿದೆ ಮತ್ತು ಅದು ಗಲಭೆಗಳಿಗೆ ಕಾರಣವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.
Published on

ಬಾಗಲಕೋಟೆ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ವಂಶಾಡಳಿತ ರಾಜಕೀಯ ಉತ್ತುಂಗಕ್ಕೇರಲಿದೆ ಮತ್ತು ಅದು ಗಲಭೆಗಳಿಗೆ ಕಾರಣವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.

ತೇರದಾಳದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಚಿಸಿದರೆ ರಾಜ್ಯದ ಅಭಿವೃದ್ಧಿ 'ರಿವರ್ಸ್ ಗೇರ್' ಆಗಲಿದೆ ಎಂದು ಹೇಳಿದ್ದಾರೆ.

ಮೇ 10 ರಂದು ಮತದಾನ ನಡೆಯಲಿರುವ ಕರ್ನಾಟಕದಲ್ಲಿ 'ರಾಜಕೀಯ ಸ್ಥಿರತೆ'ಗಾಗಿ ಸ್ಪಷ್ಟ ಜನಾದೇಶ ಕೋರಿದ ಶಾ, ಬಿಜೆಪಿ ಮಾತ್ರ ರಾಜ್ಯವನ್ನು 'ನವ ಕರ್ನಾಟಕದತ್ತ ಕೊಂಡೊಯ್ಯಬಲ್ಲದು' ಎಂದು ಹೇಳಿದರು.

'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಾಜವಂಶದ ರಾಜಕೀಯವು ಸಾರ್ವಕಾಲಿಕ ಉತ್ತುಂಗದಲ್ಲಿರುತ್ತದೆ ಮತ್ತು ಕರ್ನಾಟಕವು ಗಲಭೆಗಳಿಂದ ಪೀಡಿತವಾಗಲಿದೆ' ಎಂದು ಪಕ್ಷದ ಪ್ರಮುಖ ತಾರಾ ಪ್ರಚಾರಕರಲ್ಲಿ ಒಬ್ಬರಾದ ಶಾ ಹೇಳಿದರು.

'ಕಾಂಗ್ರೆಸ್ ತಪ್ಪಾಗಿ ಅಧಿಕಾರಕ್ಕೆ ಬಂದರೆ, ಭ್ರಷ್ಟಾಚಾರವು ಸಾರ್ವಕಾಲಿಕವಾಗಿ ಹೆಚ್ಚಾಗುತ್ತದೆ ಮತ್ತು 'ತುಷ್ಟೀಕರಣ'ದ ರಾಜಕೀಯ ಇರುತ್ತದೆ' ಎಂದು ಎಂದು ತಿಳಿಸಿದರು. 

ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಅಮಿತ್ ಶಾ ಅವರು, ತಮ್ಮ ಪಕ್ಷದ ನಾಯಕರ ಜೊತೆ ಸಭೆ, ಸರಣಿ ಸಾರ್ವಜನಿಕ ಸಭೆಗಳು ಮತ್ತು ರೋಡ್‌ಶೋಗಳನ್ನು ನಡೆಸುತ್ತಿದ್ದಾರೆ. ಈ ಮೂಲಕ ದಕ್ಷಿಣದ ರಾಜ್ಯದಲ್ಲಿ ಸರ್ಕಾರ ರಚಿಸಲೇ ಬೇಕೆಂದು ಎಲ್ಲಾ ರೀತಿಯ ತಂತ್ರಗಳನ್ನು ಮಾಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com