ರಾಹುಲ್ ಗಾಂಧಿ ದೇಶ ಮುನ್ನಡೆಸಬೇಕು ಎಂಬುದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಆಶಯ: ಸುರ್ಜೇವಾಲಾ

ಜನರ ಬಗ್ಗೆ ಸಹಾನುಭೂತಿ, ಜನರೊಂದಿಗೆ ಸಂಪರ್ಕ, ಅವರ ಸಿದ್ಧಾಂತ ಹಾಗೂ ಜನರ ಸಾಮಾನ್ಯರ ಒಳಿತಿಗಾಗಿ ಅವರಲ್ಲಿರುವ ಬದ್ಧತೆ ನೋಡಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ದೇಶವನ್ನು ಮುನ್ನಡೆಸಬೇಕೆಂದು ಬಯಸುತ್ತಾರೆ.
ರಣದೀಪ್ ಸಿಂಗ್ ಸುರ್ಜೇವಾಲಾ
ರಣದೀಪ್ ಸಿಂಗ್ ಸುರ್ಜೇವಾಲಾ
Updated on

ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ತಮ್ಮ ನಾಯಕತ್ವವನ್ನು ಸಮರ್ಪಕವಾಗಿ ಸಾಬೀತುಪಡಿಸಿದ್ದಾರೆ. ಹೀಗಾಗಿ ಅವರು ದೇಶವನ್ನು ಮುನ್ನಡೆಸಬೇಕು ಎಂಬದು ಕಾಂಗ್ರೆಸ್ ಕಾರ್ಯಕರ್ತರ ಆಶಯವಾಗಿದೆ ಎಂದು ಪಕ್ಷದ ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, ನಾಯಕನಿಗೆ ಸಂಬಂಧಿಸಿದಂತೆ, ಕಾಂಗ್ರೆಸ್ ಕಾರ್ಯಕರ್ತನಾಗಿ, ರಾಹುಲ್ ಗಾಂಧಿ ತಮ್ಮ ನಾಯಕತ್ವವನ್ನು ಸಮರ್ಪಕವಾಗಿ ಸಮರ್ಥವಾಗಿ ಸಾಬೀತುಪಡಿಸಿದ್ದಾರೆ ಎಂದು ನಾನು ಹೇಳಬಲ್ಲೆ. ಜನರ ಬಗ್ಗೆ ಸಹಾನುಭೂತಿ, ಜನರೊಂದಿಗೆ ಸಂಪರ್ಕ, ಅವರ ಸಿದ್ಧಾಂತ ಹಾಗೂ ಜನರ ಸಾಮಾನ್ಯರ ಒಳಿತಿಗಾಗಿ ಅವರಲ್ಲಿರುವ ಬದ್ಧತೆ ನೋಡಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ದೇಶವನ್ನು ಮುನ್ನಡೆಸಬೇಕೆಂದು ಬಯಸುತ್ತಾರೆ ಎಂದಿದ್ದಾರೆ.

ಬಿಜೆಪಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ಹೆಚ್ಚು ಅವಲಂಬಿತವಾಗಿದೆ, ಆದರೆ ಕಾಂಗ್ರೆಸ್ ಅಥವಾ ಅದರ I.N.D.I.A ಬಣವು ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎಂದು ಬಿಂಬಿಸಲಿಲ್ಲ. ಆದರೆ, 2024ರ ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಹೆಸರು ಕೇಳಿ ಬರುತ್ತಿದೆ.

ರಣದೀಪ್ ಸಿಂಗ್ ಸುರ್ಜೇವಾಲಾ
ಬಿಜೆಪಿ 150 ಸೀಟು ದಾಟುವುದಿಲ್ಲ, ಸಂವಿಧಾನ ಬದಲಿಸುವ ಯತ್ನವನ್ನು INDIA ವಿಫಲಗೊಳಿಸುತ್ತದೆ: ರಾಹುಲ್ ಗಾಂಧಿ

ದೇಶಕ್ಕೆ ಸಂವೇದನಾಶೀಲ, ಸಹಾನುಭೂತಿಯುಳ್ಳ ಮತ್ತು ಜನರನ್ನು ಪ್ರೀತಿಸುವ ವ್ಯಕ್ತಿಯ ಅಗತ್ಯವಿದೆ ಎಂದು ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿರುವ ಸುರ್ಜೇವಾಲಾ ಹೇಳಿದರು. ಪಕ್ಷದ ಪ್ರಧಾನ ಮಂತ್ರಿ ಯಾರು ಎಂದು ಬಿಂಬಿಸದಿರುವ ಕಾರಣಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ತೀರ್ಮಾನ ಮಾಡಿ ಸರ್ವಾನುಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದು ಸುರ್ಜೇವಾಲಾ ತಿಳಿಸಿದ್ದಾರೆ. "ಒಬ್ಬ ವ್ಯಕ್ತಿ, ಇಡೀ ದೇಶದಲ್ಲಿ ಒಂದೇ ಧ್ವನಿ, ಒಂದು ರಾಷ್ಟ್ರ ಒಂದು ಚುನಾವಣೆ, ಇತ್ಯಾದಿ ಕೆಲಸ ಮಾಡುವುದಿಲ್ಲ" ಎಂದು ಅವರು ಹೇಳಿದರು.

ರಾಹುಲ್ ಅವರು ವಯನಾಡಿನಿಂದ ಸ್ಪರ್ಧಿಸುತ್ತಾರೆಂದರೆ ಅಮೇಥಿಯಲ್ಲಿ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂಬ ಬಿಜೆಪಿಯ ವಾದಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದ ಅವರು, ಇದು ಭಾರತ ವಿರೋಧಿ ಮತ್ತು ಈ ದೇಶದ ನೀತಿಗೆ ವಿರುದ್ಧವಾಗಿದೆ. ದೇಶವನ್ನು ಪ್ರಾದೇಶಿಕತೆ, ಭಾಷೆ, ಜಾತಿ, ಧರ್ಮ ಮತ್ತು ಅಸ್ಮಿತೆಯ ಬಹು ಛಾಯೆಗಳಲ್ಲಿ ವಿಭಜಿಸಲು ಸಂಕುಚಿತ ಶಕ್ತಿಗಳು ಈ ವಾದ ಎತ್ತುತ್ತಿದ್ದಾರೆ ಎಂದರು.

ಜನರೇ ರಾಜ್ಯ ಮತ್ತು ದೇಶದ ಮಾಲೀಕರು. ನಾನು ನಂಬಿಕೆಯುಳ್ಳವನಾಗಿ ಹೇಳುವುದಾದರೆ ಅವು ದೊಡ್ಡ ದೇವರುಗಳು ಅಥವಾ ದೇವಾಲಯಗಳು. ಅವರು ಯಾವುದೇ ಸರ್ಕಾರದ ಪಾಲುದಾರರು, ಪಾಲುದಾರರು ಮಾಲೀಕರಾಗದಿದ್ದರೆ, ನೀವು ಕಲ್ಯಾಣ ರಾಜ್ಯವಾಗುವುದನ್ನು ನಿಲ್ಲಿಸುತ್ತೀರಿ, ಎಂದು ಅರ್ಥ ಎಂಬುದಾಗಿ ಹೇಳಿದ ಅವರು ಪಕ್ಷದ ದೃಷ್ಟಿಕೋನವನ್ನು ವಿವರಿಸಿದರು.

ರಣದೀಪ್ ಸಿಂಗ್ ಸುರ್ಜೇವಾಲಾ
ಜೂನ್ 4ಕ್ಕೆ ಪ್ರಧಾನಿ ಮೋದಿ ಕೆಳಗಿಳಿದು, ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ: ಸುರ್ಜೇವಾಲಾ

ಜಾತಿ, ಧರ್ಮ, ಪ್ರದೇಶಗಳಿಗೆ ಕಡಿವಾಣ ಹಾಕುವ ಕಾಂಗ್ರೆಸ್‌ ಮೇಲೆ ಜನರಿಗೆ ನಂಬಿಕೆ ಬಂದಿದೆ. ಕರ್ನಾಟಕದಲ್ಲಿ, ನಿರೀಕ್ಷೆಗೂ ಮೀರಿದ ಅಗಾಧ ಬೆಂಬಲ ಮತ್ತು ಪ್ರೀತಿ ವ್ಯಕ್ತವಾಗುತ್ತಿದೆ. ಇದನ್ನು ಪರಿಗಣಿಸಿದರೆ ಕಾಂಗ್ರೆಸ್ ಸುಲಭವಾಗಿ 20 ಸ್ಥಾನಗಳನ್ನು ಪಡೆಯುತ್ತದೆ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣಾ ಫಲಿತಾಂಶಗಳು ರಾಜ್ಯ ಸರ್ಕಾರದ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಯ ನಂತರ ಬರುವ ಅದ್ಭುತ ಫಲಿತಾಂಶಗಳು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಾವಾಗಿಯೇ ಕುಸಿಯುವಂತೆ ಮಾಡುತ್ತವೆ ಎಂದು ಹೇಳಿದರು. ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಶಾಸಕರು ಮತ ಹಾಕಿಲ್ಲ ಎಂದು ಇದೇ ವೇಳೆ ಸ್ಮರಿಸಿದರು.

ಸಂದರ್ಶನ: ರಾಮು ಪಾಟೀಲ್

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com