ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ 10 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮರಾಠ ಪಕ್ಷ (ಆರ್ಎಂಪಿ) ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಆರ್ಎಂಪಿಯ ಶ್ಯಾಂಸುಂದರ್ ಗಾಯಕವಾಡ್, ಬೆಳಗಾವಿ ಕ್ಷೇತ್ರದ ಆರ್ಎಂಪಿ ಅಭ್ಯರ್ಥಿಯಾಗಿ ವಕೀಲ ಈಶ್ವರ ರುದ್ರಪ್ಪ ಘಾಡಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಗಾಯಕ್ ವಾಡ್ ಅವರು ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಜಿ ಡಿ ಘೋರ್ಪಡೆ, ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ನಾರಾಯಣರಾವ್ ಗಾಯಕವಾಡ, ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ವಿನೋದ ಸಾಳುಂಕೆ, ಬೀದರ್ ಲೋಕಸಭೆ ಕ್ಷೇತ್ರಕ್ಕೆ ವಿಜಯಕುಮಾರ ಪಟೇಲ್, ಬಾಗಲಕೋತ ಮುಧೋಳಕ್ಕೆ ಶ್ರೀಕಾಂತ್ ಸಭಾ ಕ್ಷೇತ್ರ, ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ದೇವರಾಜ್ ಶಿಂಧೆ ಸ್ಪರ್ಧಿಸಲಿದ್ದಾರೆ.
ವಿಜಯಪುರ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಶ್ಯಾಂ ಸುಂದರ್ ಗಾಯಕ್ ವಾಡ್ ತಿಳಿಸಿದರು.
Advertisement