ಸಂಡೂರು ಉಪಚುನಾವಣೆ ಸೋಲು: ಕಮಲ ಪಾಳಯದಲ್ಲಿ ಬಂಡಾಯದ ಕಿಡಿ; ಶ್ರೀರಾಮುಲು ಬೆನ್ನಿಗೆ ನಿಂತ ಕಾರ್ಯಕರ್ತರು!

ಶ್ರೀರಾಮಲು ಜೊತೆಗೆ ಪಕ್ಷ ನಡೆದುಕೊಂಡು ರೀತಿ ಸರಿಯಲ್ಲ ಎಂದಿರುವ ಬಿಜೆಪಿ ಕಾರ್ಯಕರ್ತರು, ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನ ಭೇಟಿ ಮಾಡಲು ಮುಂದಾಗಿದೆ.
Sriramulu
ಬಿ ಶ್ರೀರಾಮುಲು
Updated on

ಬಳ್ಳಾರಿ: ಸಂಡೂರು ಉಪಚುನಾವಣೆ ಸೋಲಿನ ಬೆನ್ನಲ್ಲೇ ಬಿಜೆಪಿಯಲ್ಲಿ ಬಿರುಕು ಮೂಡಿದೆ. ಶ್ರೀರಾಮುಲು ವಿರುದ್ಧ ಅಗರ್ವಾಲ್‌ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಪಕ್ಷದಲ್ಲಿ ಬಂಡಾಯದ ಕಿಚ್ಚು ಹೊತ್ತಿಕೊಂಡಿದೆ. ಈ ನಡುವಲ್ಲೇ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಪಕ್ಷ ಶ್ರೀರಾಮಲು ಜೊತೆಗೆ ನಡೆದುಕೊಂಡು ರೀತಿ ಸರಿಯಲ್ಲ ಎಂದಿರುವ ಬಿಜೆಪಿ ಕಾರ್ಯಕರ್ತರು, ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನ ಭೇಟಿ ಮಾಡಲು ಮುಂದಾಗಿದೆ.

ಈ ನಡುವೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು ಅವರು, ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ ಸಂದರ್ಭ ಬಂದರೆ ನಾನು ಹೈಕಮಾಂಡ್‌ ನಾಯಕರನ್ನ ಭೇಟಿ ಮಾಡಿ ಬರುತ್ತೇನೆ. ಈ ಎಲ್ಲಾ ಬೆಳವಣಿಗಗಳ ಬಗ್ಗೆ ನಾನು ಹೈಕಮಾಂಡ್‌ ಗಮನಕ್ಕೆ ತರುತ್ತೇನೆ, ನಾನು ಪಕ್ಷ ಬಿಡಲ್ಲ, ನಮ್ಮಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ, ನಾವೇ ಸರಿ ಪಡಿಸಿಕೊಳ್ಳುತ್ತೇನೆ. ನಾನು ಮಾತನಾಡುವ ಸಂದರ್ಭ ಬಂದಾಗ ಟೈಮ್‌ ನೋಡಿ ಮಾತನಾಡುತ್ತೇನೆ, ನನ್ನ ಬಗ್ಗೆ ದೆಹಲಿ ಹೈಕಮಾಂಡ್‌ ನಾಯಕರಿಗೆ ಗೊತ್ತಿದೆ ಎಂದು ಹೇಳಿದರು.

ರಾಧಾಮೋಹನ್ ದಾಸ್ ಅವರ ಆರೋಪದಿಂದ ನನಗೆ ನೋವಾಗಿದೆ. ಆದರೆ, ರಾಷ್ಟ್ರೀಯ ಅಧ್ಯಕ್ಷರು ನನಗೆ ಕರೆ ಮಾಡಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅವರ ಸೂಚನೆಯಂತೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು. ಇದೇ ವೇಳೆ ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ ಎಂದೂ ತಿಳಿಸಿದರು.

Sriramulu
ಪರಿಹಾರ ಕಾಣದ ಬಿಜೆಪಿಯ ಬೀದಿ ರಂಪ ಇಬ್ಭಾಗಕ್ಕೆ ಮುನ್ನುಡಿಯೆ? (ಸುದ್ದಿ ವಿಶ್ಲೇಷಣೆ)

ನಾನು ಪಕ್ಷ ಬಿಡುವ ಪ್ರಶ್ನೆ ಇಲ್ಲ, ನನಗೆ ಸಂಕಟ ಆಗಿದ್ದಕ್ಕೆ ಪಕ್ಷ ಬಿಡೋದಾಗಿ ಹೇಳಿದ್ದೆ, ನಿಮಗೆ ಇಷ್ಟ ಇಲ್ಲ ಎಂದಾದರೆ ನಾನು ಪಕ್ಷ ಬಿಡುತ್ತೇನೆ. ಆದರೆ, ಪಕ್ಷ ಬಿಡುವ ಮುನ್ನವೇ ಹೈಕಮಾಂಡ್‌ ಗೆ ಹೇಳುತ್ತೇನೆ. ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ಎಲ್ಲವನ್ನೂ ಹೇಳಿಯೇ ಬಿಡುತ್ತೇನೆ. ನಾನು ಈವರೆಗೂ ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ, ಕೆಲಸ ಮಾಡಿದ್ದೇನೆ. ಇಲ್ಲಿ ಸುಮ್ಮನಿದ್ದರೆ, ಕೆಲಸ ಮಾಡಿದವರಿಗೆ ಬೆಲೆಯೇ ಇಲ್ಲ.

ರಾಧಾಮೋಹನ್ ದಾಸ್ ಉತ್ತರಪ್ರದೇಶದವರು ಅವರಿಗೆ ಇಲ್ಲಿನ ಕೆಲವು ವಿಚಾರಗಳು ಗೊತ್ತಿಲ್ಲ. ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದೇನೆ. ಈ ವಿಚಾರವನ್ನು ರಾಜ್ಯಾಧ್ಯಕರಾದ ಬಿ ವೈ ವಿಜಯೇಂದ್ರ ಅವರಿಗೂ ತಿಳಿಸಿದ್ದೇನೆ. ನಾನು ಕೆಲಸ ಮಾಡಿಲ್ಲ ಎಂದು ಜನಾರ್ದನರೆಡ್ಡಿ ಹೇಳಿರೋದು ಸ್ಪಷ್ಟವಾಗಿದೆ. ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ರೆಡ್ಡಿ ಮಾತು ಕೇಳಿ ನನ್ನ ಬಗ್ಗೆ ರಾಧಾಮೋಹನ್ ದಾಸ್ ಲಘುವಾಗಿ ಮಾತನಾಡಿದ್ದಾರೆ ಎಂದು ಬೇಸರ ಹೊರ ಹಾಕಿದರು.

ಕಾಂಗ್ರೆಸ್ ಓಲೈಕೆ ಕುರಿತು ಮಾತನಾಡಿ, ಬಿಜೆಪಿ ನನ್ನ ತಾಯಿಯಂತಿದೆ. ನಾನು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದೇನೆ. ನಾನು ಬಿಜೆಪಿಯೊಂದಿಗಿದ್ದೇನೆ ಮತ್ತು ಎಂದಿಗೂ ಪಕ್ಷ ಬದಲಿಸಲ್ಲ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com