ಮೋಹನ್ ಭಾಗವತ್ ಹೇಳಿದಂತೆ ಮೋದಿ ಕೆಳಗಿಳಿಯಲಿ, ನಿತಿನ್ ಗಡ್ಕರಿ ಪ್ರಧಾನಿಯಾಗಲಿ: ಬೇಳೂರು ಗೋಪಾಲಕೃಷ್ಣ

75 ವರ್ಷ ತುಂಬಿದವರು ಅಧಿಕಾರದಿಂದ ಕೆಳಗಿಳಿಯಬೇಕು ಎನ್ನುವ ಮೋಹನ್ ಭಾಗವತ್ ಅವರ ನಿಲುವನ್ನು ಸ್ವಾಗತಿಸುತ್ತೇನೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.
Belur Gopalakrishna
ಬೇಳೂರು ಗೋಪಾಲಕೃಷ್ಣ
Updated on

ಶಿವಮೊಗ್ಗ: 75 ವರ್ಷ ತುಂಬಿದ ಬಳಿಕ ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದ ಬಿಜೆಪಿ ಈಗ ನರೇಂದ್ರ ಮೋದಿ ವಿಚಾರದಲ್ಲೂ ಮೋಹನ್ ಭಾಗವತ್ ಅವರ ಆಶಯದಂತೆ ನಡೆದುಕೊಳ್ಳಲಿ. ಪ್ರಧಾನಿ ಮೋದಿ ಅವರು 75 ವರ್ಷ ತುಂಬಿದ ನಂತರ ರಾಜೀನಾಮೆ ನೀಡಿದರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಧಾನಿಯಾಗಲಿ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಬುಧವಾರ ನಾಗ್ಪುರದಲ್ಲಿ ಸಂಘದ ಸಿದ್ಧಾಂತವಾದಿ ದಿವಂಗತ ಮೊರೋಪಂತ್ ಪಿಂಗ್ಲೆ ಸ್ಮರಣಾರ್ಥ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭಾಗವತ್, ನಿಮಗೆ 75 ವರ್ಷ ತುಂಬಿತು ಎಂದರೆ, ಅದು ನಿವೃತ್ತಿ ಪಡೆಯುವ ಸಮಯ. ನೀವು ನಿವೃತ್ತಿ ಪಡೆದು ಇತರರಿಗೆ ದಾರಿ ಮಾಡಿಕೊಡಬೇಕು. ಪಿಂಗ್ಲೆ ಅವರೂ ಇದೇ ಮಾತನ್ನು ಹೇಳಿದ್ದರು ಎಂದಿದ್ದರು.

75 ವರ್ಷ ತುಂಬಿದವರು ಅಧಿಕಾರದಿಂದ ಕೆಳಗಿಳಿಯಬೇಕು ಎನ್ನುವ ಮೋಹನ್ ಭಾಗವತ್ ಅವರ ನಿಲುವನ್ನು ಸ್ವಾಗತಿಸುತ್ತೇನೆ ಎಂದ ಬೇಳೂರು ಗೋಪಾಲಕೃಷ್ಣ ಅವರು, 'ಪ್ರಧಾನಿ ಮೋದಿ ಅಧಿಕಾರದಿಂದ ಕೆಳಗಿಳಿದರೆ ಸಚಿವ ನಿತಿನ್ ಗಡ್ಕರಿ ದೇಶದ ಮುಂದಿನ ಪ್ರಧಾನಿಯಾಗಬೇಕು. ಏಕೆಂದರೆ ಗಡ್ಕರಿ ಅವರಿಗೆ ದೇಶದ ಸಾಮಾನ್ಯ ಜನರ ಬಗ್ಗೆ ಕಾಳಜಿ ಇದೆ' ಎಂದು ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿದೆ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ದೇಶದ ಸಂಪತ್ತು ಕೆಲವೇ ಜನರ ಪಾಲಾಗುತ್ತಿದೆ' ಎಂದು ಗಡ್ಕರಿ ಅವರು ಹೇಳಿರುವುದೇ ಇದಕ್ಕೆ ಸಾಕ್ಷಿ. ಹೀಗಾಗಿ, ಪ್ರಧಾನಿ ಹುದ್ದೆಗೆ ಅವರೇ ಅರ್ಹರು. ಅವರ ಸೇವೆ ಮತ್ತು ಅವರು ಎಂತಹ ವ್ಯಕ್ತಿ ಎಂದು ದೇಶದ ಜನರಿಗೆ ತಿಳಿದಿದೆ' ಎಂದರು.

Belur Gopalakrishna
Watch | "75 ವರ್ಷಕ್ಕೆ ನಿವೃತ್ತಿ ಹೊಂದಬೇಕು": ಮೋಹನ್ ಭಾಗವತ್ ಹೇಳಿಕೆ ಚರ್ಚೆಗೆ ಗ್ರಾಸ

'ಇದನ್ನು ಪರಿಗಣಿಸಿದಾಗ, ಅವರಿಗೆ (ದೇಶದ ಅಭಿವೃದ್ಧಿ ಬಗ್ಗೆ) ಒಂದು ಪರಿಕಲ್ಪನೆ ಇದೆ ಮತ್ತು ಅಂತಹ ಜನರನ್ನು (ಪ್ರಧಾನಿ) ಮಾಡಬೇಕು. 75 ವರ್ಷ ತುಂಬಿದವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಮೋಹನ್ ಭಾಗವತ್ ಸೂಚಿಸಿದ್ದಾರೆ. ಆದ್ದರಿಂದ ಗಡ್ಕರಿಗೆ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.

'ಯಡಿಯೂರಪ್ಪ ಅವರಿಗೆ 75 ವರ್ಷ ತುಂಬಿದೆ ಎಂದು ಬಿಜೆಪಿಯ ಪಾಪಿಗಳು ಅವರನ್ನು ಕಣ್ಣೀರು ಸುರಿಸುತ್ತಾ ರಾಜೀನಾಮೆ ನೀಡುವಂತೆ ಮಾಡಿದರು. ಅವರು ಬಿಜೆಪಿಯನ್ನು ಕಟ್ಟಿ ರಾಜ್ಯದಲ್ಲಿ ಅಧಿಕಾರಕ್ಕೆ ತಂದ ಹಿರಿಯ ನಾಯಕ. ಮೋದಿ ಜಿ ಅವರನ್ನು ಏಕೆ ವಿಭಿನ್ನವಾಗಿ ನಡೆಸಿಕೊಳ್ಳಲಾಯಿತು? ಮೋದಿ ಸೂಚನೆಯ ಮೇರೆಗೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಯಿತು ಅಲ್ಲವೇ? ಮೋಹನ್ ಭಾಗವತ್ ಕೂಡ 75 ವರ್ಷದ ನಂತರ ಅಧಿಕಾರದಲ್ಲಿ ಮುಂದುವರಿಯಬಾರದು ಮತ್ತು ಇತರರಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ, ಆದ್ದರಿಂದ ಗಡ್ಕರಿ ಅವರಿಗೆ ಅವಕಾಶ ನೀಡಲಾಗುವುದು ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com