ಮಲೇಷ್ಯಾದಲ್ಲಿ ನಿರಾಶ್ರಿತರ ಸಬಲೀಕರಣಕ್ಕೆ ತನ್ನ ತಾಂತ್ರಿಕ ಜ್ಞಾನ ಹಂಚಿಕೊಂಡ ಬೆಂಗಳೂರು ವಿದ್ಯಾರ್ಥಿ

ಕೆನಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್(ಸಿಐಎಸ್)ನ 11ನೇ ತರಗತಿಯ ವಿದ್ಯಾರ್ಥಿ ರೋಹನ್ ಜೇಕಬ್ ಅವರ ತಾಯಿಯು ಮಲೇಷಿಯಾದ ನಿರಾಶ್ರಿತರ ಕೇಂದ್ರಕ್ಕೆ ಸ್ವಯಂಸೇವಕ ಆನ್‌ಲೈನ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. 
ರೋಹನ್ ಜೇಕಬ್
ರೋಹನ್ ಜೇಕಬ್

ಬೆಂಗಳೂರು: ಕೆನಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್(ಸಿಐಎಸ್)ನ 11ನೇ ತರಗತಿಯ ವಿದ್ಯಾರ್ಥಿ ರೋಹನ್ ಜೇಕಬ್ ಅವರ ತಾಯಿಯು ಮಲೇಷಿಯಾದ ನಿರಾಶ್ರಿತರ ಕೇಂದ್ರಕ್ಕೆ ಸ್ವಯಂಸೇವಕ ಆನ್‌ಲೈನ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. 

ತನ್ನ ತಾಯಿಯ ಸಮಾಜ ಸೇವೆಯಿಂದ ಸ್ಫೂರ್ತಿ ಪಡೆದ ಜಾಕೋಬ್ ಕೂಡ ತಾನು ಶಾಲೆಯಲ್ಲಿ ಕಲಿತ ಗೂಗಲ್ ತರಗತಿಯನ್ನು ಬಳಸಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸಹಾಯ ಮಾಡಲು ಕೌಲಾಲಂಪುರದ ಜೋಟುಂಗ್ ನಿರಾಶ್ರಿತರ ಕ್ಯಾಥೊಲಿಕ್ ಕಲಿಕಾ ಕೇಂದ್ರದಲ್ಲಿ (ZRCLC)ಸ್ವಯಂಸೇವಕರಾಗಿ ಕೆಲಸ ಮಾಡಲು ಸಹಿ ಹಾಕಿದ್ದಾರೆ.

"ನನ್ನ ಸ್ವಂತ ಶೈಕ್ಷಣಿಕ ಅನುಭವ ಮತ್ತು ಶಾಲೆಯಲ್ಲಿ ಗೂಗಲ್ ತರಗತಿಯ ಬಳಕೆಯ ಮೂಲಕ, ಮಲೇಷಿಯಾದ ಕೇಂದ್ರದವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಸುಗಮಗೊಳಿಸುವ ಗೂಗಲ್ ತರಗತಿಯನ್ನು ಬಳಸಬಹುದೆಂದು ನಾನು ಅರಿತುಕೊಂಡೆ. ನಾನು ಶಾಲೆಯಲ್ಲಿ ಕಲಿತ ನನ್ನ ಐಸಿಟಿ ಮತ್ತು ಪ್ರಸ್ತುತಿ ಕೌಶಲ್ಯಗಳನ್ನು ಬಳಸಿಕೊಂಡು ಪಿಪಿಟಿಯನ್ನು ಒಟ್ಟುಗೂಡಿಸಿ ಅದನ್ನುನಿರಾಶ್ರಿತರ ಕೇಂದ್ರದ ಜತೆ ಹಂಚಿಕೊಂಡೆ. ಅವರು ಸಹ ಅದನ್ನು ಒಪ್ಪಿದರು ಮತ್ತು ನಾನು ಸಿಬ್ಬಂದಿಗೆ ಗೂಗಲ್ ಕ್ಲಾಸ್‌ರೂಮ್ ಬಳಸಲು ಸಹಾಯ ಮಾಡಿದೆ ಎಂದು ರೋಹನ್ ಜೇಕಬ್ ಅವರು ಹೇಳಿದ್ದಾರೆ.

ನಾನು ಜವಾಬ್ದಾರಿಯುತ ಗೇಮಿಂಗ್ ಕುರಿತು 12 ಮತ್ತು 13 ವರ್ಷದವರಿಗೂ ತರಗತಿಗಳನ್ನು ತೆಗೆದುಕೊಂಡೆ. ನಮಗೆ ಗೊತ್ತಿರುವ ಕೌಶಲ್ಯಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನನಗೆ ಅವಕಾಶ ಸಿಕ್ಕಿತು ಮತ್ತು ಈ ರೀತಿಯ ಕೆಲಸ ಮಾಡುವುದರಿಂದ ನನಗೆ ನಿಜವಾಗಿಯೂ ಸಂತೋಷವಾಗುತ್ತದೆ. ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತರಬೇತಿ ನೀಡುವುದು ಮುಖ್ಯ ಎಂದು ನಾನು ನಂಬುತ್ತೇನೆ ಮತ್ತು ಈ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕೊಡುಗೆ ನೀಡಲು ನನಗೆ ಸಂತೋಷವಾಗಿದೆ "ಎಂದು ರೋಹನ್ ತಿಳಿಸಿದ್ದಾರೆ.

3 ರಿಂದ 15 ವರ್ಷದೊಳಗಿನ ನಿರಾಶ್ರಿತ ಮಕ್ಕಳಿಗೆ ಸುರಕ್ಷಿತ ಕಲಿಕಾ ವಾತಾವರಣವನ್ನು ಒದಗಿಸುವುದು ಮತ್ತು ಅವರು ತಮ್ಮ ಹೊಸ ದತ್ತು ದೇಶದಲ್ಲಿ ಪುನರ್ವಸತಿ ಪಡೆದಾಗ ಅಥವಾ ಅವರು ಮಲೇಷ್ಯಾದಲ್ಲೇ ಉಳಿದಾಗ ಅವರಿಗೆ ಅನ್ವಯವಾಗುವ ಜೀವನ ಕೌಶಲ್ಯಗಳನ್ನು ಸಿದ್ಧಪಡಿಸುವುದು ಕೌಲಾಲಂಪುರ್ ಕೇಂದ್ರದ ಗುರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com