ಗದಗ: ಕುಸ್ತಿಪಟುಗಳು ರಾಷ್ಟ್ರಮಟ್ಟದಲ್ಲಿ ಖ್ಯಾತಿ; ಕಲಿಕೆಗೆ ಪ್ರೇಮಾ ಹುಚ್ಚಣ್ಣನವರ್ ಪ್ರೋತ್ಸಾಹ

ಕರ್ನಾಟಕ ಕುಸ್ತಿಪಟುಗಳ ತವರೂರಾಗಿದ್ದು, ರಾಜ್ಯದಿಂದ ಹಲವು ಖ್ಯಾತನಾಮ ಕುಸ್ತಿಪಟುಗಳು ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಅಂತೆಯೇ ಗದಗ ಪಟ್ಟಣದ ಮಕ್ಕಳು ಕುಸ್ತಿಯಲ್ಲಿ ಉತ್ಸಾಹ ತೋರುತ್ತಿದ್ದಾರೆ.
ಕುಸ್ತಿ
ಕುಸ್ತಿ

ಗದಗ: ಕುಸ್ತಿ ಕಠಿಣ ಕ್ರೀಡೆಗಳಲ್ಲಿ ಒಂದಾಗಿದ್ದು, ಇದು ಚುರುಕುತನ, ಶಕ್ತಿ ಮತ್ತು ತಂತ್ರದ ಅಗತ್ಯದಿಂದ ಕೂಡಿರುತ್ತದೆ. ಭಾರತೀಯ ಕುಸ್ತಿಪಟುಗಳು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪದಕಗಳನ್ನು ಗೆಲ್ಲುವುದನ್ನು ನೋಡುತ್ತಿರುವಾಗ, ಕುಸ್ತಿಪಟುಗಳ ಆರಂಭಿಕ ದಿನಗಳು ಮೂಲಭೂತ ಮೂಲಸೌಕರ್ಯಗಳಲ್ಲೇ ಕಳೆಯುತ್ತಾರೆ. ಕೆಸರಿನಲ್ಲಿ ತಮ್ಮ ಕೌಶಲ್ಯಗಳನ್ನು ತೋರ್ಪಡಿಸುವುದು ಮತ್ತು ಸಾಂದರ್ಭಿಕ ಗುಣಮಟ್ಟದ ಮ್ಯಾಟ್‌ಗಳ ಮೇಲೆ ತರಬೇತಿ ನಡೆಸುತ್ತಾರೆ.

ಅಂತೆಯೇ ಕರ್ನಾಟಕ ಕೂಡ ಕುಸ್ತಿಪಟುಗಳ ತವರೂರಾಗಿದ್ದು, ರಾಜ್ಯದಿಂದ ಹಲವು ಖ್ಯಾತನಾಮ ಕುಸ್ತಿಪಟುಗಳು ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಅಂತೆಯೇ ಗದಗ ಪಟ್ಟಣದ ಮಕ್ಕಳು ಕುಸ್ತಿಯಲ್ಲಿ ಉತ್ಸಾಹ ತೋರುತ್ತಿದ್ದಾರೆ. ಇದು ದಂಗಲ್ ಸಿಂಡ್ರೋಮ್ ಆಗಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ, ಆದರೆ ಗ್ರಾಮೀಣ ಪ್ರದೇಶದ ಪೋಷಕರು, ಮೊದಲು ತಮ್ಮ ಹುಡುಗಿಯರನ್ನು ತರಬೇತಿಗೆ ಕಳುಹಿಸುವುದನ್ನು ವಿರೋಧಿಸಿದ್ದರು, ಈಗ ತಮ್ಮ ಪ್ರತಿಬಂಧಕಗಳನ್ನು ಹೊರಹಾಕಿ ಮತ್ತು ತಮ್ಮ ಮಕ್ಕಳನ್ನು ಮುಂದಿನ ಚಾಂಪಿಯನ್‌ಗಳಾಗಿ ನೋಡಬೇಕೆಂದು ಆಶಿಸುತ್ತಿದ್ದಾರೆ. 2017ರಲ್ಲಿ ಗದಗ ಪಟ್ಟಣದ ಕುಸ್ತಿ ಅಖಾಡದಲ್ಲಿ ಕೇವಲ ಎಂಟು ಬಾಲಕಿಯರಿದ್ದರು. ಈ ಸಂಖ್ಯೆ ಇದೀಗ 50ಕ್ಕೆ ಏರಿಕೆಯಾಗಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಪ್ರತಿದಿನ 30 ಹುಡುಗರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ.

<strong>ಪ್ರೇಮಾ ಹುಚ್ಚಣ್ಣನವರ್</strong>
ಪ್ರೇಮಾ ಹುಚ್ಚಣ್ಣನವರ್

ಈ ಮಾದರಿ ಬದಲಾವಣೆ ಹೇಗೆ ಸಂಭವಿಸಿತು? 
ಪ್ರೇಮಾ ಹುಚ್ಚಣ್ಣನವರ್ ಮತ್ತು ಶಾಹಿದಾ ಸೇರಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅಸಂಖ್ಯಾತ ಪದಕಗಳನ್ನು ಪಡೆದಿದ್ದಾರೆ. ಪ್ರೇಮಾ ಏಷ್ಯನ್ ಚಾಂಪಿಯನ್‌ಶಿಪ್ ಮತ್ತು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಗೆದ್ದಿದ್ದು, ಇದು ಇತರ ಹುಡುಗರು ಮತ್ತು ಹುಡುಗಿಯರಿಗೆ ಮಾತ್ರವಲ್ಲದೆ ತಮ್ಮ ಮಕ್ಕಳನ್ನು ಪ್ರೇಮಾ ಸ್ಥಾನದಲ್ಲಿ ದೃಶ್ಯೀಕರಿಸಲು ಪ್ರಾರಂಭಿಸಿದ ಪೋಷಕರ ಮನಸ್ಸಿನಲ್ಲಿರುವ ಮಾನಸಿಕ ತಡೆಗಳನ್ನು ಛಿದ್ರಗೊಳಿಸಿದೆ.

ಇಂತಹ ಅವಕಾಶ ಒದಗಿ ಬಂದಾಗ ತರಬೇತುದಾರ ಶರಣಪ್ಪ ಬೇಲೇರಿ ಆ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು ಮತ್ತು ಮುಂದಿನ ಸ್ಪರ್ಧೆಯನ್ನು ಎದುರಿಸಲು ಸಿದ್ಧರಾದರು. ಪದಕದ ಭರಾಟೆ ಪ್ರಾರಂಭವಾಗುವ ಮೊದಲು, ಬೆಲೇರಿ ಪ್ರತಿಭೆಗಳನ್ನು ಗುರುತಿಸುತ್ತಾರೆ ಮತ್ತು ತಮ್ಮ ಮಕ್ಕಳನ್ನು ತರಬೇತಿಗೆ ಕಳುಹಿಸಲು ಪೋಷಕರ ಮನವೊಲಿಸಲು ಅವರ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಅವರ ವಾದಕ್ಕೆ ಅನೇಕ ಗ್ರಾಮಸ್ಥರು ಮರುಪ್ರಶ್ನೆ ಹಾಕಿದರಾದರೂ, ಹುಡುಗಿಯರು ಮನೆಯೊಳಗೆ ಇರಬೇಕು, ಅಂತಹ ತರಬೇತಿ ಅವರಿಗೆ ಅಪಾಯಕಾರಿ ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಆದರೆ ಬೆಲೇರಿ ಇದಾವುದಕ್ಕೂ ಹಿಂಜರಿಯದೇ ಅಚಲರಾಗಿದ್ದರು, ಮತ್ತು ಅಂತಿಮವಾಗಿ, ಕೆಲವು ವರ್ಷಗಳ ಹಿಂದೆ ಎಂಟು ಹುಡುಗಿಯರನ್ನು ತನ್ನ ಶಿಬಿರಕ್ಕೆ ಸೇರುವಂತೆ ಮನವರಿಕೆ ಮಾಡಿದರು. ಹಣಕಾಸಿನ ಅಡಚಣೆಗಳ ನಡುವೆಯೂ, ಬೇಲೇರಿ ಅವರಿಗೆ ತರಬೇತಿ ನೀಡುವುದನ್ನು ಮುಂದುವರೆಸಿದರು. ಬಳಿಕ ಇದೇ ತಂಡದ ಹುಚ್ಚಣ್ಣವರ್ ಅಂತರಾಷ್ಟ್ರೀಯ ವೇದಿಕೆಯಲ್ಲಿ ಅಗ್ರಸ್ಥಾನ ಪಡೆದಾಗ, ನಿವಾಸಿಗಳು ಅವರ ತರಬೇತಿಯನ್ನು ಕೀಳಾಗಿ ನೋಡುವುದನ್ನು ನಿಲ್ಲಿಸಿದರು.

ಈಗ ಗದಗದಿಂದ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ತರಬೇತಿ ಪಡೆಯಲು ಹಲವರು ಮುಂದೆ ಬರುತ್ತಿದ್ದಾರೆ ಎಂದು ಬೇಲೇರಿ ಹೇಳಿದ್ದಾರೆ. ಈಗ ಗದಗದಲ್ಲಿ ದಂಗಲ್ 2.0 ಆರಂಭವಾಗಿದ್ದು, ದಿನಕ್ಕೆ ಎರಡು ಬಾರಿ ತರಬೇತಿ ನಡೆಯುತ್ತಿದೆ. ಅಭ್ಯಾಸ ಅವಧಿಗಳನ್ನು ಬೆಳಿಗ್ಗೆ 6.30 ರಿಂದ 9 ರವರೆಗೆ ಮತ್ತು ಬೆಳಿಗ್ಗೆ 4.30 ರಿಂದ 7.30 ರವರೆಗೆ ನಡೆಸಲಾಗುತ್ತಿದೆ, ಇದನ್ನು ಸ್ಪರ್ಧೆಗಳು ಸಮೀಪಿಸಿದಾಗ ವಿಸ್ತರಿಸಲಾಗುತ್ತದೆ. ಕುಸ್ತಿಪಟುಗಳ ಸಂಖ್ಯೆ ಹೆಚ್ಚಾದಂತೆ, ಬೇಲೇರಿ ಗುಂಪುಗಳನ್ನು ರಚಿಸಿದರು ಮತ್ತು ಹೊಸಬರಿಗೆ ಸಹಾಯ ಮಾಡಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ಒಬ್ಬರನ್ನು ತಮ್ಮ ನಾಯಕನನ್ನಾಗಿ ನೇಮಿಸಿದರು.

ಈ ಬಗ್ಗೆ ಹೆಮ್ಮೆಯಿಂದಲೇ ಮಾತನಾಡಿರುವ ಹೊಸಬರಲ್ಲಿ ಕೆಲವರು, ''ನಾವು ಕುಸ್ತಿಪಟುಗಳಾಗಲು ಪ್ರೇರಣೆ ನೀಡಿದ ಗ್ರಾಮೀಣ ಭಾಗದ ಹುಡುಗಿಯರು ಮತ್ತು ಹುಡುಗರ ಸಾಧನೆಗಳನ್ನು ನೋಡಿದ್ದೇವೆ. ನಮ್ಮ ಪೋಷಕರು ನಮ್ಮನ್ನು ಸಂತೋಷದಿಂದ ತರಬೇತಿಗೆ ಕಳುಹಿಸಿದ್ದಾರೆ, ಮತ್ತು ನಾವು ಸಹ ಶ್ರಮಿಸುತ್ತಿದ್ದೇವೆ. ಅವರಲ್ಲಿ ಕೆಲವರು ಆರು ತಿಂಗಳ ಹಿಂದೆ ತರಬೇತಿ ಶಿಬಿರಕ್ಕೆ ಸೇರಿಕೊಂಡರು ಮತ್ತು ಕೆಲವು ಸ್ಥಳೀಯ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ದೇಶಕ್ಕಾಗಿ ಹಲವು ಪದಕಗಳನ್ನು ಗೆಲ್ಲುವ ಕನಸು ಕಾಣುತ್ತಿದ್ದೇವೆ. ಮೇಲಾಗಿ, ಕುಸ್ತಿಯು ನಮ್ಮನ್ನು ಸದೃಢವಾಗಿಸುತ್ತದೆ ಮತ್ತು ಆತ್ಮರಕ್ಷಣೆಯಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಕುಸ್ತಿಪಟುಗಳ ಪೋಷಕರು ಈ ಬಗ್ಗೆ ಮಾತನಾಡಿ, 'ನಮ್ಮ ಮಕ್ಕಳು ಉತ್ತಮ ತರಬೇತಿ ಪಡೆಯುತ್ತಿದ್ದಾರೆ ಮತ್ತು ಪದಕಗಳನ್ನು ಗೆಲ್ಲುವುದನ್ನು ನೋಡಿ ನಮಗೆ ಸಂತೋಷವಾಗಿದೆ. ಕೆಲವು ಪಾಲಕರು ತಮ್ಮ ಮಕ್ಕಳೊಂದಿಗೆ ಪ್ರತಿದಿನ ದ್ವಿಚಕ್ರ ವಾಹನಗಳಲ್ಲಿ ತರಬೇತಿಗಾಗಿ ಗದಗ ಹೊರಾಂಗಣ ಕ್ರೀಡಾಂಗಣಕ್ಕೆ ಬರುತ್ತಾರೆ. ಅವರ ನಿಸ್ವಾರ್ಥ ಸೇವೆಗಾಗಿ ನಾವು ಶರಣಪ್ಪ ಬೇಲೇರಿಗೆ ಧನ್ಯವಾದ ಹೇಳುತ್ತೇವೆ. ಏಕೆಂದರೆ ಅವರ ತರಬೇತಿ ಶುಲ್ಕವು ಅತ್ಯಲ್ಪವಾಗಿದ್ದು, ಅವರು ನಮ್ಮ ಮಕ್ಕಳಿಗೆ ತರಬೇತಿ ನೀಡಲು ಹಗಲಿರುಳು ಶ್ರಮಿಸುತ್ತಾರೆ ಎಂದು ಹೇಳಿದ್ದಾರೆ.

ತಮ್ಮ ಕಷ್ಟದ ಹಾದಿ ಕುರಿತು ಮಾತನಾಡಿದ ತರಬೇತುದಾರ ಬೇಲೇರಿ ಅವರು, 'ಮೊದಲು, ಪೋಷಕರನ್ನು ಮನವೊಲಿಸುವುದು ಕಷ್ಟಕರವಾಗಿತ್ತು, ಆದರೆ ಕೆಲವು ಹುಡುಗಿಯರು ಏನು ಸಾಧಿಸಿದ್ದಾರೆಂದು ಅವರು ನೋಡಿದಾಗ, ಅವರು ತಮ್ಮ ಮಕ್ಕಳನ್ನೂ ಕಳುಹಿಸಿದರು. ದಿನವೂ ಅನೇಕ ಮಕ್ಕಳು ಬಂದು ಚೆನ್ನಾಗಿ ಕೆಲಸ ಮಾಡುತ್ತಿರುವುದನ್ನು ನೋಡಿ ನನಗೆ ಸಂತೋಷವಾಗುತ್ತಿದೆ. ಕುಸ್ತಿಪಟುಗಳು ತಮ್ಮ ದೈಹಿಕ ಸಾಮರ್ಥ್ಯದ ಉತ್ತುಂಗದಲ್ಲಿರಬೇಕಾಗಿರುವುದರಿಂದ ಅದಕ್ಕೆ ತಕ್ಕ ಆಹಾರ ಪದ್ಧತಿ ಜಾರಿಯಲ್ಲಿದೆ. ಎಲ್ಲಾ ವಿದ್ಯಾರ್ಥಿಗಳು ಪದಕಗಳನ್ನು ಪಡೆದು ಗದಗ ದಂಗಲ್‌ನ ಸಿನೋಸರ್ ಆಗಲಿ ಎಂದು ನಾನು ಬಯಸುತ್ತೇನೆ. ಗದಗ ಜಿಲ್ಲೆಯ ಈ ಮಕ್ಕಳು ಏಷ್ಯನ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಗೆಲ್ಲಬೇಕು ಮತ್ತು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಗುರಿಯಾಗಿದೆ ಎಂದು ಬೇಲೇರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com