
ಕೇರಳದ ಕೊಚ್ಚಿಯಲ್ಲಿ 1,100 ಹಾಸಿಗೆಗಳನ್ನು ಹೊಂದಿರುವ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ. ಮತ್ತೊಂದು ಹರಿಯಾಣದ ಫರಿದಾಬಾದ್ನಲ್ಲಿ 2,500 ಕಿ.ಮೀ ದೂರದಲ್ಲಿ ಆಸ್ಪತ್ರೆ, 2,600 ಹಾಸಿಗೆಗಳನ್ನು ಹೊಂದಿದೆ, 3.6 ಮಿಲಿಯನ್ ಚದರ ಅಡಿ ಬೃಹತ್ ರಚನೆಯಲ್ಲಿದೆ. ಉಚಿತ ವೈದ್ಯಕೀಯ ಆರೈಕೆ, ಹೃದಯ ಮತ್ತು ಮೆದುಳಿನ ಶಸ್ತ್ರಚಿಕಿತ್ಸೆಗಳನ್ನು ಭರಿಸಲಾಗದ 4 ಮಿಲಿಯನ್ಗಿಂತಲೂ ಹೆಚ್ಚು ಜನರಿಗೆ ಅನುಕೂಲವಾಗಲೆಂದು ನಿರ್ಮಿಸಲಾದ ಆಸ್ಪತ್ರೆಗಳು.
ಅಪರಿಮಿತ ಜನೋಪಕಾರ, ಸಮಾಜ ಸೇವೆ
ಇದನ್ನು ಕೇಳಿದರೆ ಇದೇನು ಸರ್ಕಾರಿ ಯೋಜನೆ ಅಥವಾ ಕಾರ್ಪೊರೇಟ್ ದತ್ತಿ ಎಂದು ಭಾವಿಸುವಿರಾ, ಇಲ್ಲ, ವಿಧವೆಯರು ಮತ್ತು ನಿರ್ಗತಿಕರಿಗೆ ಪಿಂಚಣಿ ಯೋಜನೆಯು ಈಗ 1,00,000 ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತಿದೆ, ಹಾಗಾದರೆ ಇದು ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಯೇ, ವಾರ್ಷಿಕವಾಗಿ 10 ಮಿಲಿಯನ್ಗೆ ಉಚಿತ ಊಟ ಯೋಜನೆ. ಇದು ಸಾರ್ವಜನಿಕ ಕಲ್ಯಾಣ ಯೋಜನೆಯೇ ಅಲ್ಲ, 47,000 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ನಿರಾಶ್ರಿತರಿಗೆ ನೀಡಲಾಗಿದೆ ಮತ್ತು 1,00,000 ಮನೆಗಳ ನಿರ್ಮಾಣದ ಗುರಿಯಿದೆ. ಯಾವುದೇ ಸರ್ಕಾರ, ರಾಜ್ಯ ಅಥವಾ ಕೇಂದ್ರದ ವಸತಿ ಯೋಜನೆ ಅಲ್ಲ ಇದು.
80 ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ಮತ್ತು ಶ್ರೇಷ್ಠ ಸಂಸ್ಥೆಗಳಲ್ಲಿ 4,100 ಶಿಕ್ಷಕರು ಮತ್ತು 86,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಭಾರತದಾದ್ಯಂತ 50,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆ ಪ್ರಯೋಜನವನ್ನು ನೀಡುತ್ತದೆ. ಒಂದು ದೊಡ್ಡ ಕಾರ್ಪೊರೇಟ್ ಸಿಎಸ್ಆರ್ ಯೋಜನೆಯೂ ಅಲ್ಲ.
2001 ರ ಗುಜರಾತ್ ಭೂಕಂಪ, 2004 ರ ಸುನಾಮಿ, ಕತ್ರಿನಾ ಚಂಡಮಾರುತ, 2005 ಗುಜರಾತ್ ಪ್ರವಾಹ, 2005 ಮಹಾರಾಷ್ಟ್ರ ಪ್ರವಾಹ, 2008 ಬಿಹಾರ ಪ್ರವಾಹ, 2009 ರ ಅಲಾ ಚಂಡಮಾರುತ, 2010 ಹೈಟಿ ಭೂಕಂಪ, 2011 ತೋಹೊಕು ಭೂ ಕಂಪನ, ಸುನಾಮಿ, 2013 ಉತ್ತರ ಭಾರತದ ಪ್ರವಾಹ, 2013 ಟೈಫೂನ್ ಹೈಯಾನ್, 2014 ಪಾಕಿಸ್ತಾನ ಭಾರತದ ಪ್ರವಾಹ, 2015 ನೇಪಾಳ ಭೂಕಂಪ 2015 ದಕ್ಷಿಣ ಭಾರತದ ಪ್ರವಾಹ 2016 ಪುಟ್ಟಿಂಗಲ್ ದೇವಾಲಯದ ಬೆಂಕಿ 2017 ಚಂಡಮಾರುತ ಮಾರಿಯಾ 2017ರ ಓಖಿ ಚಂಡಮಾರುತ 2018 ಕೇರಳ ಪ್ರವಾಹ, 2019 ಕೇರಳ ಪ್ರವಾಹಕ್ಕೆ ಸಹಾಯ.
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಮಿಷನ್ಗೆ 100 ಕೋಟಿ ರೂಪಾಯಿ ದೇಣಿಗೆ. ಈ ಎಲ್ಲಾ ಬೃಹತ್ ಜನೋಪಕಾರ ಕೆಲಸ ಮಾಡಿದ್ದು ಮಾತಾ ಅಮೃತಾನಂದಮಯಿ ಮಠದ ಮಾನವೀಯ ಸೇವೆ. ಇಂತಹ ಕಾರ್ಯಗಳಿಂದಲೇ ಲಕ್ಷೋಪಲಕ್ಷ ಜನರಿಂದ ಪ್ರೀತಿಯಿಂದ ಅಮ್ಮ ಎಂದು ಕರೆಯಲ್ಪಡುತ್ತಾರೆ.
ಮಠದ ಅಂತಾರಾಷ್ಟ್ರೀಯ ಪ್ರಧಾನ ಕಚೇರಿಯ ಅಂಚೆ ವಿಳಾಸವು ಯಾವುದೇ ಮಹಾನಗರದಲ್ಲಿನ ಯಾವುದೇ ಐಷಾರಾಮಿ ಕಟ್ಟಡದಲ್ಲಿಲ್ಲ. ಇದು ಕೇರಳದ ಒಂದು ಸಣ್ಣ ಹಳ್ಳಿಯಾದ ವಲ್ಲಿಕ್ಕಾವುನಲ್ಲಿದೆ. ಸಮುದ್ರ ಮತ್ತು ಹಿನ್ನೀರಿನಿಂದ ಸುತ್ತುವರೆದಿರುವ ಕೇವಲ 80 ಎಕರೆಗಳ ದ್ವೀಪ. ಒಂದು ಹಳ್ಳಿಯು ಅಮೆರಿಕಾ, ಆಫ್ರಿಕಾ, ಯುರೋಪ್, ಏಷ್ಯಾ ಮತ್ತು ಆಸ್ಟ್ರೇಲಿಯಾವನ್ನು ವ್ಯಾಪಿಸಿರುವ ವಿಶ್ವಾದ್ಯಂತ ಬೃಹತ್ ಮಾನವೀಯ ಸೇವೆಗಳ ಅಂತಾರಾಷ್ಟ್ರೀಯ ಪ್ರಧಾನ ಕಚೇರಿಯಾಗಿದೆ.
ಅದು ಸುಧಾಮಣಿಯವರ ಜನ್ಮಸ್ಥಳ, ಆಧುನಿಕತೆಯಿಂದ ಸಂಪರ್ಕ ಕಡಿತಗೊಂಡ ಆ ಸಣ್ಣ ಭೂಮಿಯಲ್ಲಿ ಮೀನುಗಾರ ಸಮುದಾಯದ ಸರಳ ಹುಡುಗಿ ದಶಕಗಳ ತಪಸ್ಸು ಮತ್ತು ಮಾನವೀಯತೆಯ ಮೇಲಿನ ಅಪರಿಮಿತ ಪ್ರೀತಿಯ ಮೂಲಕ, ಭಕ್ತರನ್ನು ಮಕ್ಕಳಂತೆ ಅಪ್ಪಿಕೊಂಡು ಸಂತರಾಗಿ ಮತ್ತು ಜಾಗತಿಕ ಆಧ್ಯಾತ್ಮಿಕ ಬೆಳಕಾಗಿ ಹೊರಹೊಮ್ಮಿದ್ದಾರೆ. ಆಧ್ಯಾತ್ಮಿಕತೆ ಮತ್ತು ಸೇವೆ ಅವರಲ್ಲಿ ಮೈಗೂಡಿದೆ.
ವಲ್ಲಿಕ್ಕಾವಿನಲ್ಲಿ ಜನಿಸಿದ ಸುಧಾಮಣಿ ಈಗ ಪ್ರಸಿದ್ಧ ಅಮ್ಮನಾಗಿದ್ದಾರೆ. ಕೇರಳದ ಬುದ್ಧಿಜೀವಿಗಳಲ್ಲಿ ಒಬ್ಬರಾದ ಮತ್ತು ವಿವೇಕಾನಂದ ಕೇಂದ್ರದ ಅಧ್ಯಕ್ಷರಾದ ಸ್ವರ್ಗೀಯ ಪಿ ಪರಮೇಶ್ವರಂಜಿಯವರಿಂದಾಗಿ, ಸುಮಾರು ಮೂರು ದಶಕಗಳ ಹಿಂದೆ ನಾನು ಅಮ್ಮನ ಮೊದಲ ದರ್ಶನ ಪಡೆದೆ. ಅದಾದ ನಂತರ, ಅವರ ಅನುಗ್ರಹ ಮತ್ತು ಮಾರ್ಗದರ್ಶನ ನನಗೆ ದೊರೆಯಿತು. ಹಿಂದೂ ಜೀವನ ವಿಧಾನದಲ್ಲಿ ಅಂತರ್ಗತವಾಗಿರುವ ಸಂಸ್ಕಾರಗಳ ಮೂಲಕ ಎಲ್ಲಾ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಸಂಸ್ಥೆಗಳನ್ನು ಒಟ್ಟುಗೂಡಿಸಿ ತಮ್ಮ ಸೇವೆಗಳನ್ನು ಪ್ರದರ್ಶಿಸಲು ಮತ್ತು ಪರಿಸರ, ಪೋಷಕರು, ಹಿರಿಯರು ಮತ್ತು ಮಹಿಳೆಯರ ಮೇಲಿನ ಗೌರವವನ್ನು ಉತ್ತೇಜಿಸಲು ನನ್ನ ಪ್ರಯತ್ನವನ್ನು ಅವರು ಅಪಾರವಾಗಿ ಬೆಂಬಲಿಸಿದ್ದಾರೆ.
ಎಸ್ ಗುರುಮೂರ್ತಿ
ಸಂಪಾದಕರು, ತುಘಲಕ್ ತಮಿಳು ಪತ್ರಿಕೆ. ಅಧ್ಯಕ್ಷರು, ವಿವೇಕಾನಂದ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಕಾರ್ಯತಂತ್ರದ ಚಿಂತಕರ ಚಾವಡಿ.
Advertisement