ಅಂಧರ ಕ್ರಿಕೆಟ್
ಅಂಧರ ಕ್ರಿಕೆಟ್

ಭಾರತಕ್ಕೆ ಮತ್ತೆ ಒಲಿಯಿತು ಅಂಧರ ವಿಶ್ವಕಪ್

ಕರ್ನಾಟಕದ ಬ್ಯಾಟ್ಸ್‌ಮನ್ ಪ್ರಕಾಶ್ ಜಯರಾಮಯ್ಯ ಅವರ 82 ರನ್‌ಗಳ ಅಮೋಘ ಬ್ಯಾಟಿಂಗ್‌ನ ನೆರವಿನಿಂದಾಗಿ ಭಾರತ ...
Published on

ಕೇಪ್‌ಟೌನ್: ಕರ್ನಾಟಕದ ಬ್ಯಾಟ್ಸ್‌ಮನ್ ಪ್ರಕಾಶ್ ಜಯರಾಮಯ್ಯ  ಅವರ 82 ರನ್‌ಗಳ ಅಮೋಘ ಬ್ಯಾಟಿಂಗ್‌ನ ನೆರವಿನಿಂದಾಗಿ ಭಾರತ ಅಂಧರ ಕ್ರಿಕೆಟ್, ಭಾನುವಾರ ನಡೆದ 4 ನೇ ಆವೃತ್ತಿಯ ವಿಶ್ವಕಪ್ ಫೈನಲ್ಸ್‌ನಲ್ಲಿ ಜಯ ಸಾಧಿಸಿ, ಚಾಂಪಿಯನ್ ಪಟ್ಟ ಅಲಂಕರಿಸಿತು. ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಭಾರತ, 39.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 392 ರನ್ ಗಳಿಸಿ , ಕಪ್ ತನ್ನದಾಗಿಸಿಕೊಂಡಿತು.
2 ನೇ ಬಾರಿ ಸಾಧನೆ: 2012ರಲ್ಲಿ ಮೊದಲ ಬಾರಿಗೆ ನಡೆದಿದ್ದ ಅಂಧರ ವಿಶ್ವಕಪ್ ಪಂದ್ಯಾವಳಿ ಗೆದ್ದಿದ್ದ ಭಾರತ, ಈಗ 2 ನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ಅಂಧರ ಕ್ರಿಕೆಟ್ ವಿಶ್ವಕಪ್ ಚರಿತ್ರೆಯಲ್ಲಿ ಹೊಸ ದಾಖಲೆ ಬರೆದಿದೆ.
ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ, ಮಹಮ್ಮದ್ ಜಮೀಲ್ (102 ರನ್, 84 ಎಸೆತ, 11 ಬೌಂಡರಿ, 1 ಸಿಕ್ಸರ್), ಮಹಮ್ಮದ್ ಅಕ್ರಂ (ಅಜೇಯ 75 ರನ್, 43 ಎಸೆತ, 8 ಬೌಂಡರಿ,  1 ಸಿಕ್ಸರ್ ) ಸಹಾಯದಿಂದ 389 ರನ್ ಪೇರಿಸಿತು. ಈ ಮೊತ್ತ ಬೆನ್ನಟ್ಟಿದ ಭಾರತಕ್ಕೆ ಆಸರೆಯಾದ ಪ್ರಕಾಶ್ ಜಯರಾಮಯ್ಯ (82 ರನ್, 38 ಎಸೆತ, 11 ಬೌಂಡರಿ, 1 ಸಿಕ್ಸರ್). ಇವರ ನೆರವಿನಿಂದ ಭಾರತ , 392 ರನ್ ಗಳಿಸಿ, 5 ವಿಕೆಟ್ ಜಯ ಸಂಪಾದಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com