ನವದೆಹಲಿ: ಭಾರತದ ಅಗ್ರಮಾನ್ಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಚೆನ್ನೈ ಪ್ರವಾಹದ ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಸಾರ್ವಜನಿಕ ಪರಿಹಾರ ನಿಧಿಗೆ ರು.2 ಲಕ್ಷ ನೆರವು ನೀಡಲು ಮುಂದಾಗಿದ್ದಾರೆ.
ಪ್ರವಾಹದ ಹಾಂಕಾಂಗ್ ನಲ್ಲಿ ಟೂರ್ನಿಯೊಂದರಲ್ಲಿ ಭಾಗವಹಿಸುತ್ತಿದ್ದ ದೀಪಿಕಾ, ಚೆನ್ನೈ ನಲ್ಲಿನ ಪರಿಸ್ಥಿತಿಯನ್ನು ಹಾಂಕಾಂಗ್ ನಿಂದಲೇ ತಿಳಿಯುತ್ತಿದ್ದೆ. ನಗರ ದ್ವೀಪದಂತಾಗಿದ್ದು, ಜನರ ಪರದಾಟ ನೋವು ತಂದಿದೆ. ನಾನು ಚೆನ್ನೈಗೆ ತೆರಳಲು ಸಾಧ್ಯವಾಗದೇ ಮುಂಬೈನಲ್ಲೇ ಉಳಿದುಕೊಂಡಿದ್ದೇನೆ. ಆದಷ್ಟು ಬೇಗ ಚೆನ್ನೈಗೆ ಮರಳುತ್ತೇನೆ. ಮುಂಖ್ಯಮಂತ್ರಿಗಳು ನನ್ನ ಸಾಧನೆಗೆ ಸಾಕಷ್ಟು ಬಾರಿ ಸನ್ಮಾನಿಸಿದ್ದಾರೆ. ಹಾಗಾಗಿ ಜನರಿಗೆ ನೆರವು ನೀಡುವ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಲಕ್ಷ ನೀಡುತ್ತೇನೆ ಎಂದರು.
Advertisement