ಮುಂಬೈ: ಮಲೇಶಿಯಾ ಪ್ರವಾಸ ಕೈಗೊಂಡಿದ್ದಾಗ ಉಪ್ಪಿನಕಾಯಿ ಎಂದು ತಿಳಿದು ಕರಿದ ಜಿರಳೆಯನ್ನು ತಿಂದು ಬಿಡುತ್ತಿದ್ದೆ, ಅದೃಷ್ಟವಶಾತ್ ಸ್ವಲ್ಪದರಲ್ಲೇ ಬಚಾವ್ ಆದೆ ಎಂದು ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ಮುಂಬೈನ ಕಾರ್ಯಕ್ರಮವೊಂದರಲ್ಲಿ ವಿರಾಟ್ ಕೊಹ್ಲಿ ತಮ್ಮ ಜೀವನದ ಅತ್ಯಂತ ಕುತೂಹಲಕಾರಿ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ.
ಅಂದು ಹೋಟೆಲ್ ನ ಟೇಬಲ್ ಮೇಲೆ ಇಟ್ಟಿದ್ದ ಫ್ರೈಡ್ ಜಿರಳೆಗಳನ್ನು ಇವು ಉಪ್ಪಿನಕಾಯಿ ಇರಬಹುದು ಎಂದುಕೊಂಡು ತಿನ್ನಲು ಮುಂದಾಗಿದ್ದೆ. ಅಷ್ಟರಲ್ಲಿ ಪಕ್ಕದಲ್ಲಿದ್ದ ಕೆಲವರು ತನ್ನನ್ನು ಎಚ್ಚರಿಸಿದರು ಎಂದು ಕೊಹ್ಲಿ ಹೇಳಿದ್ದಾರೆ.
ಅಲ್ಲದೆ ಮಲಾಡ್ ನ ಇನ್ನಾರ್ ಬಿಟ್ ಮಾಲ್ ನಲ್ಲಿ ನಡೆದಿದ್ದ ಅಭಿಮಾನಿಗಳ ಜತೆಗಿನ ಚರ್ಚೆ ವೇಳೆ ನಿರಂತರ 28 ಗಂಟೆಗಳ ಕಾಲ ನಿದ್ದೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.