ರಣಜಿ: ಕರ್ನಾಟಕ ವಿರುದ್ಧ ಮುಂಬೈ ಆಲೌಟ್; ವಿನಯ್ ಕುಮಾರ್ ಗೆ 6 ವಿಕೆಟ್

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಸೆಮಿಫೈನಲ್‌ನ ಮೊದಲ...
ವಿನಯ್‌ಕುಮಾರ್‌
ವಿನಯ್‌ಕುಮಾರ್‌

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಸೆಮಿಫೈನಲ್‌ನ ಮೊದಲ ಇನಿಂಗ್ಸ್‌ನಲ್ಲಿ ಮುಂಬೈ ತಂಡವನ್ನು 44 ರನ್‌ಗಳಿಗೆ ಆಲೌಟ್‌ ಮಾಡುವ ಮೂಲಕ ಕರ್ನಾಟಕ ತಂಡ ಮುಂಬೈ ಬ್ಯಾಟ್ಸ್ ಮನ್ ಗಳ ಬೆವರಿಳಿಸಿದೆ.
ಎರಡನೇ ಇನಿಂಗ್ಸ್ ಆರಂಭಿಸಿರುವ ಕರ್ನಾಟಕವು ದಿನದ ಆಟದ ಅಂತ್ಯಕ್ಕೆ 5 ಓವರ್ ಗಳಲ್ಲಿ 2 ವಿಕೆಟ್ ಗೆ 10 ರನ್ ಗಳಿಸಿದೆ.

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ಎಲ್ಲ ವಿಕೆಟ್‌ ಕಳೆದುಕೊಂಡು 202 ರನ್‌ ಗಳಿಸಿತು. ರಾಬಿನ್‌ ಉತ್ತಪ್ಪ (68) ಗರಿಷ್ಠ ರನ್‌ ಗಳಿಸಿದರು. ಕರುಣ್‌ ನಾಯರ್‌ (49) ಔಟಾಗದೆ ಉಳಿದರು. ಕರ್ನಾಟಕ ತಂಡದ ನಾಯಕ ವಿನಯ್‌ಕುಮಾರ್‌ 6 ವಿಕೆಟ್‌ ಕಬಳಿಸಿದರು. ಅರವಿಂದ್‌ 2 ಹಾಗೂ ಅಭಿಮನ್ಯು ಮಿಥುನ್ 1ವಿಕೆಟ್‌ ಪಡೆದರು.

ಕರ್ನಾಟಕ ನೀಡಿದ 202 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಮುಂಬೈ ತಂಡ ಒಂದರ ಬೆನ್ನಿಗೊಂದು ವಿಕೆಟ್‌ ಕಳೆದುಕೊಂಡಿತು.

ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಎದುರು ಕರ್ನಾಟಕ ಗೆಲುವು ಸಾಧಿಸಿತ್ತು. ರಣಜಿ ಇತಿಹಾಸದಲ್ಲಿ ಮುಂಬೈ ವಿರುದ್ಧ ಕರ್ನಾಟಕ ಪಡೆದ ಚೊಚ್ಚಲ ಗೆಲುವು ಅದಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com