ನಾಯಕ ಧೋನಿ ಸಮರ್ಥಿಸಿಕೊಂಡ ಅಶ್ವಿನ್

ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಭುಗಿಲೇಳುತ್ತಿರುವ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿರುವ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಸರಣಿ ಸೋಲಿನ...
ಆರ್ ಅಶ್ವಿನ್
ಆರ್ ಅಶ್ವಿನ್
Updated on

ಮೀರ್ ಪುರ: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಭುಗಿಲೇಳುತ್ತಿರುವ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿರುವ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಸರಣಿ ಸೋಲಿನ ದೋಷವನ್ನು ಧೋನಿ ತಲೆಗೆ ಕಟ್ಟುವುದು ಸರಿಯಲ್ಲ ಎಂದಿದ್ದಾರೆ ಎಂದು ಖಾಸಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಢಾಕಾದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, `ಧೋನಿ, ಭಾರತ ಕ್ರಿಕೆಟ್ ರಂಗದ ದಂತಕಥೆ. ಬಾಂಗ್ಲಾದೇಶದ ಸರಣಿ ಸೋಲು ತಂಡದ ಸಾಂಸ್ಥಿಕ ಪ್ರದರ್ಶನದ ಕೊರತೆಯಿಂದ ಉಂಟಾಗಿದ್ದು. ಇದಕ್ಕೆ ಧೋನಿಯೊಬ್ಬರೇ ಕಾರಣರಲ್ಲ' ಎಂದಿದ್ದಾರೆ. ಅಲ್ಲದೆ ಬಾಂಗ್ಲಾದೇಶ ವಿರುದ್ಧ ಸರಣಿ ಸೋತ ತಂಡಗಳ ಪೈಕಿ ಭಾರತ ಮೊದಲ ತಂಡವೇನು ಅಲ್ಲ ಎಂದು ಅಶ್ವಿನ್ ಹೇಳಿದ್ದಾರೆ. ತಂಡದ ಹಿರಿಯ ಆಟಗಾರ ಸುರೇಶ್ ರೈನಾ ಸಹ ಅಶ್ವಿನ್ ವಾದವನ್ನು ಅನುಮೋದಿಸಿದ್ದಾರೆ. `ಸರಣಿ ಸೋಲಿಗೆ  ಧೋನಿಯವರನ್ನು ದೂರುವುದು ಸಲ್ಲ' ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com