ವಿಶ್ವಕಪ್ ಫುಟ್ಬಾಲ್: ಗ್ವಾಮ್ ಸೋಲಿಸಲು ಭಾರತ ತಂಡ ಕಾತುರ

ಫಿಫಾ ವಿಶ್ವಕಪ್ ಫುಟ್‌ಬಾಲ್‌ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿರುವ ಭಾರತ ಗುರುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಗ್ವಾಮ್ ಎದುರು ಗೆಲ್ಲುವ ತವಕದಲ್ಲಿದೆ...
ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ
ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ
Updated on

ಬೆಂಗಳೂರು : ಫಿಫಾ ವಿಶ್ವಕಪ್ ಫುಟ್‌ಬಾಲ್‌ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿರುವ ಭಾರತ ಗುರುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಗ್ವಾಮ್ ಎದುರು ಗೆಲ್ಲುವ ತವಕದಲ್ಲಿದೆ. ಕಳೆದ ಜೂನ್ ತಿಂಗಳಲ್ಲಿ 2–1 ಗೋಲುಗಳಿಂದ ಅನುಭವಿಸಿದ್ದ ಸೋಲಿಗೆ ತಿರುಗೇಟು ನೀಡಲು ಸಜ್ಜಾಗಿದೆ.

‘ಡಿ’ ಗುಂಪಿನಲ್ಲಿರುವ ಭಾರತ ಅರ್ಹತಾ ಸುತ್ತಿನ ಎಲ್ಲಾ ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಆದರೆ, ಸುನಿಲ್‌ ಚೆಟ್ರಿ ನೇತೃತ್ವದ ಭಾರತ ತಂಡ, ತವರು ನೆಲದಲ್ಲಿ ಪುಟ್ಟ ರಾಷ್ಟ್ರ ಗ್ವಾಮ್ ತಂಡವನ್ನು ಮಣಿಸಿ ಖಾತೆ ತೆರೆಯುವ ಲೆಕ್ಕಾಚಾರದಲ್ಲಿದೆ. ಸ್ವದೇಶದಲ್ಲಿ ಭಾರತದ ವಿರುದ್ಧ ಗೆದ್ದು ಬೀಗಿದ್ದ ಗ್ವಾಮ್‌ ಐದು ಪಂದ್ಯಗಳಿಂದ  ಒಟ್ಟು ಏಳು ಪಾಯಿಂಟ್‌ ಕಲೆ ಹಾಕಿದೆ.

 ನಾಳೆಯ ಪಂದ್ಯ ಅಷ್ಟೊಂದು ಮಹತ್ವವೇನೂ ಅಲ್ಲ. ಆದರೆ 2019ರಲ್ಲಿ ನಡೆಯಲಿರುವ ಏಷ್ಯನ್‌ ಕಪ್‌ ಟೂರ್ನಿಗೆ ಇದು ಅರ್ಹತಾ ಪಂದ್ಯ ಎಂಬ ಕಾರಣಕ್ಕಾಗಿ ಮಹತ್ವ ಪಡೆದಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com