ಎಚ್ಚರಿಕೆ ಅಗತ್ಯ: ಚುಟುಕು ಕ್ರಿಕೆಟ್ನಲ್ಲಿ ಎಷ್ಟು ಆಕ್ರಮಣಕಾರಿಯಾಗಿರಬೇಕೋ ಅಷ್ಟೇ ಮೈಯೆಲ್ಲಾ ಜಾಗ್ರತೆಯೂ ಅಗತ್ಯ. ಕಟಕ್ ಪಂದ್ಯದಲ್ಲಿ ಧಾವಂತಕ್ಕೆ ಒಳಗಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ರನೌಟ್ ಆಗಿ ಭಾರತದ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ದರು. ಈ ಪ್ರಮಾದ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ. ಇನ್ನು ಕಳೆದೆರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಆರಂಭಿಕ ಶಿಖರ್ ಧವನ್ ಮೂರನೇ ಪಂದ್ಯದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಬಹುತೇಕ ಕ್ಷೀಣಿಸಿದ್ದು, ಅವರ ಸ್ಥಾನದಲ್ಲಿ ಅಜಿಂಕ್ಯ ರಹಾನೆ ಆಡುವ ಸಾಧ್ಯತೆ ಇದೆ. ಆದಾಗ್ಯೂ ಪಿಚ್ನ ಸ್ಥಿತಿಗನುಗುಣವಾಗಿ ಈ ಪಲ್ಲಟಗಳಾಗುವ ಸಂಭವವಿದೆ. ಇನ್ನು ಸುರೇಶ್ ರೈನಾ, ಅಂಬಟಿ ರಾಯುಡು ಹಾಗೂ ಎಂ.ಎಸ್. ಧೋನಿ ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ಅನ್ನು ಸಶಕ್ತಗೊಳಿಸಲು ಮುಂಚೂಣಿಗರ ಪಾತ್ರ ಮಹತ್ವವಾಗಿದೆ.