ಶುಕ್ಲಾ ಪರ ಠಾಕೂರ್ ಬ್ಯಾಟಿಂಗ್? ಈ ಮಧ್ಯೆ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಪೂರ್ವ ವಲಯದ ಕೆಲ ಸಂಸ್ಥೆಗಳ ಅಧಿಕಾರಿಗಳ ಜತೆ ಮಾತು ಕತೆ ನಡೆಸಿದ್ದು, ಶುಕ್ಲಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಕುರಿತು ಅಭಿಪ್ರಾಯ ಸಂಗ್ರಹಿಸಿರುವ ಮಾತುಗಳು ಕೇಳಿಬಂದಿವೆ. ಕಳೆದ ಬಾರಿಯ ಬಿಸಿಸಿಐ ಮಹಾ ಸಭೆಯಲ್ಲಿ ಮಂಡಳಿಯ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಜೀವ್ ಶುಕ್ಲಾ, ಶ್ರೀನಿ ಆಪ್ತ ಅನಿರುದ್ಧ ಚೌಧರಿ ವಿರುದ್ಧ ಸೋತಿದ್ದರು. 'ಈಗಲೇ ಬಿಸಿಸಿಐ ಅಧ್ಯಕ್ಷ ಸ್ಥಾನದ ಬಗ್ಗೆ ಹೇಳಲು ಹೇಗೆ ಸಾಧ್ಯ? ಆ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ಕಾರ್ಯದರ್ಶಿ ವಿಶೇಷ ಮಹಾಸಭೆ ಕರೆಯಲಿದ್ದಾರೆ. ಅಲ್ಲಿ ಈ ಬಗ್ಗೆ ಚರ್ಚೆ ನಡೆಸಲಾ ಗುವುದು. ಅಲ್ಲೀವರೆಗೂ ಈ ಬಗ್ಗೆ ಮಾತನಾಡುವುದು ಸರಿಯಲ್ಲ'' ಎಂದು ರಾಜೀವ್ ಶುಕ್ಲಾ ತಿಳಿಸಿದ್ದಾರೆ. ಶ್ರೀನಿವಾಸನ್ ಭಾಗವಹಿಸಿದರೆ, ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ.