ಸೋನಿಪತ್(ಹರಿಯಾಣ): ಮದುವೆಗಾಗಿ ವದುವಿನ ಕಡೆಯಿಂದ 1 ರುಪಾಯಿ ವರದಕ್ಷಿಣ ಪಡೆದಿದ್ದ ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ ಅವರ ಊರಿಗೆ ಅಭಿವೃದ್ದಿಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ 10 ಕೋಟಿ ರುಪಾಯಿ ಘೋಷಿಸಿದ್ದಾರೆ.
ಸೋನಿಪತ್ ನಲ್ಲಿ ಸೋಮವಾರ ಯೋಗೇಶ್ವರ್ ದತ್ ವಿವಾಹ ಸಮಾರಂಭ ನಡೆದಿದ್ದು ಮದುವೆಗೆ ಬಂದಿದ್ದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಸ್ಥಳೀಯರು ತಮ್ಮ ಊರಿನ ಅಭಿವೃದ್ಧಿಗೆ ನೆರವು ನೀಡುವಂತೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂಧಿಸಿದ ಸಿಎಂ 10 ಕೋಟಿ ರುಪಾಯಿ ಘೋಷಣೆ ಮಾಡಿದ್ದಾರೆ. ಈ ಹಣ ಊರಿಗೆ ಕುಡಿಯುವ ನೀರಿನ ಸರಬರಾಜು, ಕಾಂಕ್ರೀಟ್ ರಸ್ತೆ ಅಭಿವೃದ್ಧಿಗೆ ಬಳಕೆಯಾಗಲಿದೆ.