ಇನ್ನು ಪಂದ್ಯದ ಬಳಿಕ ಮಾತನಾಡಿದ ಶ್ರೀಕಾಂತ್, ಪ್ರಸ್ತುತ ಜಯ ನನ್ನಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ವಾಂಗ್ ವಿಂಗ್ ಕೀ ವಿನ್ಸೆಂಟ್ ಮತ್ತು ನನ್ನ ಪ್ರದರ್ಶನ ಒಂದೇ ತೆರನಾಗಿದೆಯಾದರೂ ಪಂದ್ಯದ ನಡುವೆ ನಾನು ಕೆಲ ತಪ್ಪುಗಳನ್ನು ಮಾಡಿದ್ದೆ. ಆದರೆ ಕೂಡಲೇ ಸರಿಪಡಿಸಿಕೊಂಡ ಕಾರಣ ಜಯ ಒಲಿಯಿತು. ಫೈನಲ್ ನಲ್ಲಿ ಲೀ ಯನ್ನು ಎದುರಿಸಬೇಕಿದ್ದು, ನಿಜಕ್ಕೂ ಆತ ಕಠಿಣ ಎದುರಾಳಿ ಎಂದು ಶ್ರೀಕಾಂತ್ ಹೇಳಿದ್ದಾರೆ.