ತಿರುಪತಿ: ಮೂರು ಬಾರಿಗೆ ಒರಿಸ್ಸಾ ಮುಖ್ಯಮಂತ್ರಿಯಾಗಿದ್ದ ಹಾಗೂ ಸದ್ಯ ಅಸ್ಸಾಂ ರಾಜ್ಯಪಾಲರಾಗಿ ಕೆಲಸ ನಿರ್ವಹಿಸುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ ಜಾನಕಿ ವಲ್ಲಭ ಪಟ್ನಾಯಕ್ ಇಂದು ತಿರುಪತಿಯಲ್ಲಿ ನಿಧನರಾಗಿದ್ದಾರೆ.
ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲು ೮೯ ವರ್ಷದ ಪಟ್ನಾಯಕ್ ಇಲ್ಲಿಗೆ ಬಂದಿದ್ದರು. ಮೂಲಗಳ ಪ್ರಕಾರ ಕಳೆದ ರಾತ್ರಿ ಎದೆ ನೋವಿನ ಬಳಲಿಕೆ ಪ್ರಾರಂಭವಾಗಿದ್ದರಿಂದ ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಆಸ್ಪತ್ರೆಯಲ್ಲಿ ನಿಧನಹೊಂದಿದರು ಎಂದು ತಿಳಿದುಬಂದಿದೆ.
ಪಟ್ನಾಯಾಕ್ ಅವರ ಮೂಲಸ್ಥಳ ಪೂರಿಯಲ್ಲಿ ಕೊನೆಯ ವಿಧಿಗಳು ನಡೆಯಲಿವೆ.
Advertisement