ಪರಿಹಾರ ಸಾಮಗ್ರಿಗಳ ಮೇಲೆ 'ಅಮ್ಮ' ಚೀಟಿ ಅಂಟಿಸಲು ಒತ್ತಾಯ

ತಮಿಳುನಾಡು ಪ್ರವಾಹದಿಂದ ತತ್ತರಿಸಿರುವ ಸಮಯದಲ್ಲಿ, ಸಾರ್ವಜನಿಕರ ಸಹಕಾರದಿಂದ ದೇಶದ ವಿವಿದೆಡೆಗಳಿಂದ ಪರಿಹಾರ ಸಾಮಗ್ರಿಗಳು ಚೆನ್ನೈ ಮತ್ತು ಇತರ
ಪರಿಹಾರ ಸಾಮಗ್ರಿಗಳ ಮೇಲೆ 'ಅಮ್ಮ' ಚೀಟಿ ಅಂಟಿಸಲು ಒತ್ತಾಯ
ಪರಿಹಾರ ಸಾಮಗ್ರಿಗಳ ಮೇಲೆ 'ಅಮ್ಮ' ಚೀಟಿ ಅಂಟಿಸಲು ಒತ್ತಾಯ
Updated on

ಬೆಂಗಳೂರು: ತಮಿಳುನಾಡು ಪ್ರವಾಹದಿಂದ ತತ್ತರಿಸಿರುವ ಸಮಯದಲ್ಲಿ, ಸಾರ್ವಜನಿಕರ ಸಹಕಾರದಿಂದ ದೇಶದ ವಿವಿದೆಡೆಗಳಿಂದ ಪರಿಹಾರ ಸಾಮಗ್ರಿಗಳು ಚೆನ್ನೈ ಮತ್ತು ಇತರ ಪ್ರದೇಶಗಳಿಗೆ ಸರಬರಾಜಾಗುತ್ತಿರುವ ಸಮಯದಲ್ಲಿ ತುರ್ತು ಪರಿಸ್ಥಿಯನ್ನು ಲೆಕ್ಕಿಸದೆ ಕೆಲವರು ವಾಹನಗಳನ್ನು ತಡೆಗಟ್ಟಿ ಪರಿಹಾರ ಸಾಮಗ್ರಿಗಳ ಮೇಲೆ ಮುಖ್ಯಮಂತ್ರಿ ಜಯಲಲಿತಾ ಅವರ ಫೋಟೊ ಅಂಟಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹಲವರು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ದೂರಿದ್ದಾರೆ. ಈ ಕಾರ್ಯಕ್ಕೆ ನಿರಾಕರಿಸಿದರೆ ಪರಿಹಾರ ಸಾಮಗ್ರಿಗಳನ್ನು ಒಳಗೆ ಹೋಗಲು ಬಿಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.  

ಹೀಗೆ ದೂರಿರುವ ಹಲವಾರು ಜನರಲ್ಲಿ ವಿನೋದ್ ದ್ವಾರ್ಕಾನಿ ಎಂಬುವವರು ಫೇಸ್ಬುಕ್ ನಲ್ಲಿ ಬರೆದುಕೊಂಡಿರುವುದು ಹೀಗೆ.

"ಕೊಯಂಬತ್ತೂರಿನಿಂದ ಬರುತ್ತಿದ್ದ ೬ ಟ್ರಕ್ಕುಗಳನ್ನು ಶ್ರೀಪೆರಂಬುದೂರಿನಲ್ಲಿ ತಡೆದು ನಿಲ್ಲಿಸಲಾಯಿತು ಮತ್ತು ಎಲ್ಲ ಪರಿಹಾರ ಸಾಮಗ್ರಿಗಳ ಚೀಲದ ಮೇಲೆ ಅಮ್ಮ ಚೀಟಿಗಳನ್ನು ಅಂಟಿಸಲಾಯಿತು.

"ಇದು ನನಗೆ ಇನ್ನಿಲ್ಲದ ಕೋಪ ತರಿಸಿದೆ. ಕಡಲೂರಿಗೆ ತೆರಳಿನ್ನ ನನ್ನ ಗೆಳೆಯರನ್ನು ಹಲವಾರು ಗೂಂಡಾಗಳು ತಡೆದು ಪರಿಹಾರ ಸಾಮಗ್ರಿಗಳ ಮೇಲೆ ಅಮ್ಮ ಸ್ಟಿಕರ್ ಅಂಟಿಸಿದ್ದಾರೆ. ಇದು ನಾಚಿಕೆಗೇಡಿನ ರಾಜಕೀಯ. ಇದರ ಬಗ್ಗೆ ಮಾತನಾಡುವುದಕ್ಕೂ ನಾಚಿಕೆಯಾಗುತ್ತಿದೆ. ಆದರೆ ಒಳಗೆ ಸಿಕ್ಕಿಹಾಕಿಕೊಂಡಿರುವ ಜನ ಇದೆಲ್ಲಾ ಅಮ್ಮನ ಕೆಲಸ ಎಂದು ಕುರುಡಾಗಿ ನಂಬುತ್ತಾರೆ." ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com