ಗುತ್ತಿಗೆ ನೌಕರರ ಉದ್ಯೋಗ ಕಡಿತಕ್ಕೆ ಎಎಪಿ ತಡೆ

ಚುನಾವಣಾ ಪ್ರಚಾರದ ವಚನವನ್ನು ಜಾರಿಗೆ ತರುವ ಮೊದಲ ಹೆಜ್ಜೆಯಾಗಿ ಯಾವುದೇ ರೀತಿಯ ಗುತ್ತಿಗೆ ನೌಕರರ ಉದ್ಯೋಗವನ್ನು ಕಡಿತಗೊಳಿಸುವುದಕ್ಕೆ ಎಎಪಿ
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ಚುನಾವಣಾ ಪ್ರಚಾರದ ವಚನವನ್ನು ಜಾರಿಗೆ ತರುವ ಮೊದಲ ಹೆಜ್ಜೆಯಾಗಿ ಯಾವುದೇ ರೀತಿಯ ಗುತ್ತಿಗೆ ನೌಕರರ ಉದ್ಯೋಗವನ್ನು ಕಡಿತಗೊಳಿಸುವುದಕ್ಕೆ ಎಎಪಿ ಸರ್ಕಾರ ತಡೆ ನೀಡಿದೆ. ಈ ಪ್ರಕರಣದ ಸರಿಯಾದ ಅಧ್ಯಯನವಾಗುವರೆಗೂ ಯಾವುದೇ ಗುತ್ತಿಗೆ ಉದ್ಯೋಗ ಕಡಿತಗೊಳ್ಳುವುದಿಲ್ಲ ಎಂದಿರುವ ಈ ನಡೆ ಸುಮಾರು ಒಂದು ಲಕ್ಷ ನೌಕರರಿಗೆ ಉಪಯುಕ್ತವಾಗಲಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಖಂಡತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ವೈದ್ಯರು, ನರ್ಸ್ ಗಳು, ಉಪನ್ಯಾಸಕರು, ಕರ್ಮಚಾರಿಗಳನ್ನೂ ಒಳಗೊಂಡಂತೆ ದೆಹಲಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಗುತ್ತಿಗೆ ಆಧಾರಿತ ಉದ್ಯೋಗದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com