ಗುತ್ತಿಗೆ ನೌಕರರ ಉದ್ಯೋಗ ಕಡಿತಕ್ಕೆ ಎಎಪಿ ತಡೆ

ಚುನಾವಣಾ ಪ್ರಚಾರದ ವಚನವನ್ನು ಜಾರಿಗೆ ತರುವ ಮೊದಲ ಹೆಜ್ಜೆಯಾಗಿ ಯಾವುದೇ ರೀತಿಯ ಗುತ್ತಿಗೆ ನೌಕರರ ಉದ್ಯೋಗವನ್ನು ಕಡಿತಗೊಳಿಸುವುದಕ್ಕೆ ಎಎಪಿ
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ಚುನಾವಣಾ ಪ್ರಚಾರದ ವಚನವನ್ನು ಜಾರಿಗೆ ತರುವ ಮೊದಲ ಹೆಜ್ಜೆಯಾಗಿ ಯಾವುದೇ ರೀತಿಯ ಗುತ್ತಿಗೆ ನೌಕರರ ಉದ್ಯೋಗವನ್ನು ಕಡಿತಗೊಳಿಸುವುದಕ್ಕೆ ಎಎಪಿ ಸರ್ಕಾರ ತಡೆ ನೀಡಿದೆ. ಈ ಪ್ರಕರಣದ ಸರಿಯಾದ ಅಧ್ಯಯನವಾಗುವರೆಗೂ ಯಾವುದೇ ಗುತ್ತಿಗೆ ಉದ್ಯೋಗ ಕಡಿತಗೊಳ್ಳುವುದಿಲ್ಲ ಎಂದಿರುವ ಈ ನಡೆ ಸುಮಾರು ಒಂದು ಲಕ್ಷ ನೌಕರರಿಗೆ ಉಪಯುಕ್ತವಾಗಲಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಖಂಡತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ವೈದ್ಯರು, ನರ್ಸ್ ಗಳು, ಉಪನ್ಯಾಸಕರು, ಕರ್ಮಚಾರಿಗಳನ್ನೂ ಒಳಗೊಂಡಂತೆ ದೆಹಲಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಗುತ್ತಿಗೆ ಆಧಾರಿತ ಉದ್ಯೋಗದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com