ನೆರೆಯವರ ಜಾಗದಲ್ಲಿ ಮಲ ವಿಸರ್ಜನೆ: ಮಹಿಳೆಯ ನಾಲಗೆ ಕತ್ತರಿಸಿದ ಆಸಾಮಿ

ಬಿಹಾರದ ಗ್ರಾಮವೊಂದರಲ್ಲಿ ತನ್ನ ನೆರೆಯ ಮಹಿಳೆ ತನಗೆ ಸೇರಿದ್ದ ಜಾಗದಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಪಾಟ್ನಾ: ಬಿಹಾರದ ಗ್ರಾಮವೊಂದರಲ್ಲಿ ತನ್ನ ನೆರೆಯ ಮಹಿಳೆ ತನಗೆ ಸೇರಿದ್ದ ಜಾಗದಲ್ಲಿ ಬಹಿರ್ದೆಸೆಗೆ ಹೋದದ್ದಕ್ಕೆ ಅವಳ ನಾಲಗೆಯನ್ನು ಕತ್ತರಿಸಿದ ಅಮಾನವೀಯ ಘಟನೆ ವರದಿಯಾಗಿದೆ.

ಪಾಟ್ನಾದಿಂದ ೫೦ ಕಿಮೀ ದೂರದಲ್ಲಿರುವ ವೈಷ್ಣವಿ ಜಿಲ್ಲೆಯ ಚಕ್ಯಾಜ್ ಗ್ರಾಮದಲ್ಲಿ ಈ ಘಟನೆ ಸಂಬವಿಸಿದೆ.

ಕುಸುಮಾ ದೇವಿಗೆ ಪಾಠ ಕಲಿಸಲು ಅವಳ ನಾಲಗೆಯನ್ನು ನೆರೆಮನೆಯ ಭಾಗವತ್ ಪಾಸ್ವಾನ್ ಎಂಬ ವ್ಯಕ್ತಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಸುಮಾ ದೇವಿಯ ಪತಿ ಇಂದ್ರದೇವ್ ಪಾಸ್ವಾನ್ ತನ್ನ ಪಕ್ಕದ ಮನೆಯವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

"ನನ್ನ ಪತ್ನಿಯನ್ನು ಮೊದಲು ಮನಬಂದಂತೆ ಥಳಿಸಿ ನಂತರ ಅವಳ ನಾಲಗೆಯನ್ನು ಅರ್ಧಕ್ಕೆ ಕತ್ತರಿಸಿದರು" ಎಂದು ಅವನು ತಿಳಿಸಿದ್ದಾನೆ.

"ಎರಡೂ ಕುಟುಂಬಗಳ ಹಳೆಯ ದ್ವೇಷಕ್ಕೆ ಕೂಡ ಈ ಘಟನೆ ನಡೆದಿರಬಹುದು" ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com