ಡಿಕೆ ರವಿ ಕೋಲಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಮುನಿಯಪ್ಪಗೆ ಇಷ್ಟವಿರಲಿಲ್ಲ. ಮುನಿಯಪ್ಪ ತಮ್ಮ ಕ್ಷೇತ್ರದಲ್ಲಿನ ಡಿಕೆ ರವಿ ಕಾರ್ಯಶೈಲಿಯಿಂದಾಗಿ ಅವರ ವಿರುದ್ಧ ಮುನಿಸಿಕೊಂಡು ಹಲವಾರು ಬಾರಿ ವಾಗ್ವಾದ ನಡೆಸಿದ್ದರು. ಅಲ್ಲದೇ ಸ್ಥಳೀಯ ಶಾಸಕ ವರ್ತೂರು ಪ್ರಕಾಶ್ ಕೂಡಾ ರವಿಗೆ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಅಲ್ಲದೆ ಸರ್ಕಾರಿ ಅಧಿಕಾರಿಯೊಬ್ಬರಿಗೆ ದೂರವಾಣಿ ಕರೆ ಮೂಲಕ ವರ್ತೂರು ಪ್ರಕಾಶ್ ಬೆದರಿಕೆ ಹಾಕಿದ್ದ ವಿಚಾರವನ್ನು ಕೂಡ ಸಿಬಿಐ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಆ ನಿಟ್ಟಿನಲ್ಲಿ ಮುನಿಯಪ್ಪ ಮತ್ತು ವರ್ತೂರು ಪ್ರಕಾಶ್ ಅವರನ್ನು ತನಿಖೆಗೆ ಒಳಪಡಿಸಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.