ಲಂಕಾ ಮೀನುಗಾರರಿಂದ ಏಳು ಜನರ ಅಪಹರಣ; ಹಣದ ಬೇಡಿಕೆ

ಸಶಸ್ತ್ರಧಾರಿ ಶ್ರೀಲಂಕಾ ಮೀನುಗಾರರು ತಮಿಳುನಾಡಿನ ಏಳು ಮೀನುಗಾರರನ್ನು ಅಪಹರಿಸಿ ಅವರ ಕುಟುಂಬ ವರ್ಗದಿಂದ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ರಾಮೇಶ್ವರ: ಸಶಸ್ತ್ರಧಾರಿ ಶ್ರೀಲಂಕಾ ಮೀನುಗಾರರು ತಮಿಳುನಾಡಿನ ಏಳು ಮೀನುಗಾರರನ್ನು ಅಪಹರಿಸಿ ಅವರ ಕುಟುಂಬ ವರ್ಗದಿಂದ ಹಣದ ಬೇಡಿಕೆಯಿಟ್ಟಿರುವ ಪ್ರಸಂಗ ಇಂದು ಕೊಡೈಕಾರಿಯಿಂದಾಚೆಗಿನ ಸಮುದ್ರದಲ್ಲಿ ನಡೆಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಂಬನ್ ನಿಂದ ಈ ಮೀನುಗಾರಾರು ಕಳೆದ ರಾತ್ರಿ ಸಮುದ್ರಕ್ಕೆ ಇಳಿದಿದ್ದರು. ಸಶಸ್ತ್ರಧಾರಿ ಶ್ರೀಲಂಕಾ ಮೀನುಗಾರರು ಇವರನ್ನು ಅಪಹರಿಸಿ ಅವರ ಮೊಬೈಲ್ ಫೋನುಗಳಿಂದ ಅವರ ಕುಟುಂಬ ಸದಸ್ಯರಿಗೆ ಕರೆ ಮಾಡಿ ಸುರಕ್ಷಿತ ಬಿಡುಗಡೆಗೆ ಹಣದ ಬೇಡಿಕೆಯಿಟ್ಟಿದ್ದಾರೆ.

ಎಷ್ಟು ದುಡ್ಡಿನ ಬೇಡಿಕೆಯಿಟ್ಟಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇದಲ್ಲದೆ ಇನ್ನು ೫೦೦ ಹಡಗುಗಳಲ್ಲಿ ಮೀನು ಹಿಡಿಯಲು ತೆರಳಿದ್ದವರಿಗೆ ಶ್ರೀಲಂಕಾದ ನೌಕಾ ಅಧಿಕಾರಿಗಳು ಬೆದರಿಸಿ ಓಡಿಸಿರುವುದಲ್ಲದೆ ಅವರ ಮೀನು ಪರದೆಗಳನ್ನು ಕತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com