ತಿರುವನಂತಪುರಂ: ಕೇರಳ ವಿಧಾನಸಭೆಯ ಹೊರಗೆ ಸಿಪಿಐ(ಎಂ) ನೇತೃತ್ವದಲ್ಲಿ ಎಲ್ಡಿಎಫ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದ್ದು, ಈ ವೇಳೆ ಹೃದಯಾಘಾತದಿಂದ ಎಲ್ಡಿಎಫ್ ಕಾರ್ಯಕರ್ತನೊಬ್ಬ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಕೇರಳದಲ್ಲಿಂದು ವಿತ್ತ ಸಚಿವ ಕೆ.ಎಂ. ಮಾಣಿ ಬಜೆಟ್ ಮಂಡನೆ ಮಾಡಿದ್ದು, ಬಜೆಟ್ಗೆ ವಿಪಕ್ಷಗಳು ವಿರೋಧ ಸೂಚಿಸಿದ್ದವು. ವಿಧಾನಸಭೆಯೊಳಗೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಹೊಯ್ ಕೈ ನಡೆದಿದ್ದು, ವಿಧಾನಸಭೆಯ ಹೊರಗೂ ವಿಪಕ್ಷ ಸಿಪಿಎಂ ಪ್ರತಿಭಟನೆ ಹಮ್ಮಿಕೊಂಡಿತ್ತು.
Advertisement