ರಾಮೇಶ್ವರಂ: ಕತ್ಚತಿವು ದ್ವೀಪದ ಬಳಿ ಮಂಗಳವಾರ ಮೀನು ಹಿಡಿಯುತ್ತಿದ್ದ ಭಾರತೀಯ ಮೀನುಗಾರರ ಹಡಗುಗಳ ಮೇಲೆ ಶ್ರೀಲಂಕಾ ನೌಕಾದಳದ ಸಿಬ್ಬಂದಿ ಕಲ್ಲುಗಳನ್ನು ಎಸೆದಿದ್ದರಿಂದ ಎರಡು ಹಡಗುಗಳಿಗೆ ತೀವ್ರ ಹಾನಿಯುಂಟಾಗಿದೆ.
ಆದರೆ ಈ ಘಟನೆಯಿಂದ ಮೀನುಗಾರರಿಗೆ ಯಾವುದೇ ಹಾನಿಯುಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಂಕಾ ನೌಕಾದಳದ ಈ ಘಟನೆಯಿಂದ ಮೀನುಗಾರರನ್ನು ಭಾರತದ ನೀರಿನ ಗಡಿಯೊಳಕ್ಕೆ ಒತ್ತಾಯಪೂರ್ವಕವಾಗಿ ಕಳುಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶ್ರೀಲಂಕಾ ಪ್ರಧಾನ ಮಂತ್ರಿ ರನಿಲ್ ವಿಕ್ರಮಸಿಂಘೆ ಅವರನ್ನು ಭೇಟಿ ಮಾಡಿ ಮೀನುಗಾರರ ಸಮಸ್ಯೆಯನ್ನು ಮಾನವೀಯತೆಯ ದೃಷ್ಟಿಯಿಂದ ನೋಡಲು ಆಗ್ರಹಿಸಿದ್ದರು.
Advertisement