ಡಿಕೆ ರವಿ ಸಾವು ಸಿಬಿಐಗೆ ಹಸ್ತಾಂತರ
ಡಿಕೆ ರವಿ ಸಾವು ಸಿಬಿಐಗೆ ಹಸ್ತಾಂತರ

ಡಿಕೆ ರವಿ ಪ್ರಕರಣ: ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರ

ಡಿಕೆ ರವಿ ಪೋಷಕರ ಒತ್ತಾಯ, ವಿಪಕ್ಷಗಳ ಪ್ರತಿಭಟನೆ ಹಾಗೂ ಜನತೆಯ ಕೂಗಿಗೆ ಅಂತು ಮಣಿದಿರುವ ರಾಜ್ಯ ಸರ್ಕಾರ ದಕ್ಷ ಐಎಎಸ್ ಅಧಿಕಾರಿ ಡಿಕೆ. ರವಿ ನಿಗೂಢ ಸಾವು ಪ್ರಕರಣವನ್ನು ಸಿಬಿಐ ತನಿಗೆ ವಹಿಸಿದೆ.
Published on

ಬೆಂಗಳೂರು: ಡಿಕೆ ರವಿ ಪೋಷಕರ ಒತ್ತಾಯ, ವಿಪಕ್ಷಗಳ ಪ್ರತಿಭಟನೆ ಹಾಗೂ ಜನತೆಯ ಕೂಗಿಗೆ ಅಂತು ಮಣಿದಿರುವ ರಾಜ್ಯ ಸರ್ಕಾರ ದಕ್ಷ ಐಎಎಸ್ ಅಧಿಕಾರಿ ಡಿಕೆ. ರವಿ ನಿಗೂಢ ಸಾವು ಪ್ರಕರಣವನ್ನು ಸಿಬಿಐ ತನಿಗೆ ವಹಿಸಿದೆ.

ಇಂದು ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಿಕೆ ರವಿ ಪ್ರಕರಣವನ್ನು ಸಿಬಿಐಗೆ ವಹಿಸಿರುವುದಾಗಿ ಘೋಷಿಸಿದರು.

ಒಂದು ವಾರದಿಂದ ಬಿಸಿ ಬಿಸಿ ಚರ್ಚೆ ಹಾಗೂ ಪ್ರತಿಭಟನೆಗಳಿಗೆ ಕಾರಣವಾಗಿದ್ದ ರವಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ರವಿ ಪೋಷಕರು, ವಿಪಕ್ಷಗಳು ಸೇರಿದಂತೆ ರಾಜ್ಯದ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಈ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ಅಂತು ಸಿಬಿಐ ತನಿಖೆಗೆ ವಹಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com