ಈ ಬಗ್ಗೆ ಮಾತನಾಡಿರುವ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು, ರಾಜಕೀಯ ಗಣ್ಯರಿಗೆ ಪ್ರಚಾರ ಪಡೆದುಕೊಳ್ಳುವುದು ಬೇಕು. ಪ್ರಚಾರ ಪಡೆದುಕೊಳ್ಳುವುದು ಸರಿ. ಆದರೆ, ಇಂತಹ ಘಟನೆಗಳಲ್ಲಿಯೂ ಪ್ರಚಾರ ಪಡೆದುಕೊಳ್ಳುವ ಪ್ರಯತ್ನ ಸಲ್ಲದು. ಒಂದು ಜಮೀರ್ ಅವರು ಯಾರಿಗೂ ತಿಳಿಯದೆಯೇ ಮೃತ ಯುವಕನ ಕುಟುಂಬಕ್ಕೆ ನೀಡಿದ್ದರೆ, ಆ ವಿಷಯವನ್ನು ಕುಟುಂಬಸ್ಥರು ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದರೆ ಅದರ ಮೌಲ್ಯ ಬೇರೆಯೇ ಆಗಿರುತ್ತಿತ್ತು ಎಂದು ಹೇಳಿದ್ದಾರೆ.