ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿಂದು ರಾಯಲ್ ವೆಡ್ಡಿಂಗ್

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ರಾಜಸ್ಥಾನದ ಡುಂಗರಪುರ್ ರಾಜಮನೆತನದ ತ್ರಿಷಿಕಾ ಕುಮಾರಿ ಸಿಂಗ್ ಕಲ್ಯಾಣೋತ್ಸವಕ್ಕೆ ಮೈಸೂರು ಅರಮನೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ...
ಮೈಸೂರು ಅರಮನೆಯಲ್ಲಿಂದು ರಾಯಲ್ ವೆಡ್ಡಿಂಗ್
ಮೈಸೂರು ಅರಮನೆಯಲ್ಲಿಂದು ರಾಯಲ್ ವೆಡ್ಡಿಂಗ್
Updated on

ಮೈಸೂರು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ರಾಜಸ್ಥಾನದ ಡುಂಗರಪುರ್ ರಾಜಮನೆತನದ ತ್ರಿಷಿಕಾ ಕುಮಾರಿ ಸಿಂಗ್ ಕಲ್ಯಾಣೋತ್ಸವಕ್ಕೆ ಮೈಸೂರು ಅರಮನೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಮೈಸೂರು ಅರಮನೆಯಲ್ಲಿ 36 ವರ್ಷಗಳ ಬಳಿಕ ನಡೆಯುತ್ತಿರುವ ರಾಜ ವಿವಾಹಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸೋಮವಾರ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ ರಾಜವಂಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.

ರಾಜಮನೆತನದ ಈ ವಿವಾಹಕ್ಕೆ ಸಾಕ್ಷಿಯಾಗಲು ರಾಜವಂಶಸ್ಥರ ಕುಟುಂಬಸ್ಥರು, ದೇಶ-ವಿದೇಶಗಳ ಆಹ್ವಾನಿತ ಗಣ್ಯರು ಈಗಾಗಲೇ ಅರಮನೆ ನಗರಿಗೆ ಆಗಮಿಸಿದ್ದಾರೆ. ಸ್ವತಃ ಪ್ರಮೋದಾ ದೇವಿ ಅವರು ವಿನ್ಯಾಸಗೊಳಿಸಿದ 'ಅಂಗರಕ' ಧರಿಸಿ ಯದುವೀರ್ ಮದುವೆಯಲ್ಲಿ ಮಿಂಚಲಿದ್ದಾರೆ.

ವಿವಾಹ ಮಹೋತ್ಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಹಲವು ಗಣ್ಯರು ಪಾಲ್ಗೊಳ್ಳುತ್ತಿದ್ದು, ಈಗಾಗಲೇ ಅರಮನೆ ಸುತ್ತ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com