ವಿಡಿಯೋ
ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಹಾಗೂ ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿ (ದೋಷಮುಕ್ತಗೊಳಿಸಿ) ತೀರ್ಪು ಪ್ರಕಟಿಸಿದೆ.
ತೀರ್ಪು ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಿಜ್ ಭೂಷಣ್ ಸಿಂಗ್, "ನನ್ನನ್ನು ಖುಲಾಸೆಗೊಳಿಸಲಾಗಿಲ್ಲ. ನನ್ನನ್ನು ಗೌರವದಿಂದ ಖುಲಾಸೆಗೊಳಿಸಲಾಗಿದೆ..."
ನನ್ನ ವಿರುದ್ಧ ಇರುವವರಿಗೆ ಹೇಳಲು ನನ್ನ ಬಳಿ ಏನೂ ಇಲ್ಲ ಎಂದು ಹೇಳಿದರು.
ತೀರ್ಪು ಕುರಿತು ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಆಡಳಿತಾರೂಢ ಸರ್ಕಾರವು ಬಹುಮತವನ್ನು ಹೊಂದಿದ್ದರೂ, ಭವಿಷ್ಯದ ನ್ಯಾಯಾಂಗ ಪರಿಶೀಲನೆಗಾಗಿಯೂ ಸಹ ವಿರೋಧ ಪಕ್ಷದ ದೃಷ್ಟಿಕೋನಗಳನ್ನು ದಾಖಲಿಸುವುದು ಅತ್ಯಗತ್ಯ ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.