ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಆಯೋಗ, ದೂರಿಗೆ ಪ್ರತಿಕ್ರಯಿಸುವಂತೆ ಕಂಪನಿಗೆ ಸೂಚಿಸಿತ್ತು. ಆಗ ಕಂಪನಿಯವರು ತರುಣ್ ಭಗತ್ ಅವರು ಅನಿವಾಸಿ ಭಾರತೀಯರಾಗಿದ್ದು, ವಾಸಿಸುವ ಉದ್ದೇಶದಿಂದ ಫ್ಲಾಟ್ ಖರೀದಿಸುತ್ತಿಲ್ಲ. ಕೇವಲ ಲಾಭಕ್ಕಾಗಿ ಫ್ಲ್ಯಾಟ್ ಖರೀದಿಸುತ್ತಿದ್ದಾರೆ. ಹಾಗಾಗಿ, ಹಣ ಮರುಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.