ಪಠಾಣ್‍ಕೋಟ್ ದಾಳಿ: ಭಾರತ-ಪಾಕ್ ಬಾಂಧವ್ಯಕ್ಕೆ ಸವಾಲು- ಪಾಕ್ ಮಾಧ್ಯಮಗಳು

ಪ್ರಧಾನಿ ಮೋದಿ ಅವರ ಭೇಟಿಯು ಭಾರತ-ಪಾಕ್ ಬಾಂಧವ್ಯವನ್ನು ಗಟ್ಟಿಗೊಳಿಸುವ ಆಶಾಭಾವ ಮೂಡಿಸಿದ್ದರೂ, ಪಠಾಣ್‍ಕೋಟ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಇಸ್ಲಾಮಾಬಾದ್: ಪ್ರಧಾನಿ ಮೋದಿ ಅವರ ಭೇಟಿಯು ಭಾರತ-ಪಾಕ್ ಬಾಂಧವ್ಯವನ್ನು ಗಟ್ಟಿಗೊಳಿಸುವ ಆಶಾಭಾವ ಮೂಡಿಸಿದ್ದರೂ, ಪಠಾಣ್‍ಕೋಟ್ ದಾಳಿಯು ಉಭಯ ದೇಶಗಳ ಸಂಬಂಧಕ್ಕೆ ಸವಾಲು ಹಾಕಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ.
ಭಾನುವಾರ ಎಕ್ಸ್‍ಪ್ರೆಸ್ ಟ್ರಿಬ್ಯೂನ್, ದ ನ್ಯೂಸ್ ಇಂಟರ್ ನ್ಯಾಷನಲ್, ಡಾನ್ ಸೇರಿದಂತೆ ಪಾಕ್‍ನ ಪ್ರಮುಖ ಪತ್ರಿಕೆಗಳು ಪಠಾಣ್‍ಕೋಟ್ ಉಗ್ರ ದಾಳಿಯ ಸುದ್ದಿಯನ್ನು ಮುಖಪುಟದಲ್ಲೇ ಪ್ರಕಟಿಸಿದವು. ಜತೆಗೆ, ಈ ದಾಳಿಯು ಇನ್ನೇನು ಸರಿಹೋಗುತ್ತಿದ್ದ ಉಭಯ ದೇಶಗಳ ಸಂಬಂಧಕ್ಕೆ ಹುಳಿ ಹಿಂಡಿದೆ ಎಂದು ಎಕ್ಸ್‍ಪ್ರೆಸ್ ಟ್ರಿಬ್ಯೂನ್ ಹೇಳಿದೆ. 
ಇನ್ನು ದಾಳಿ ಬೆನ್ನಲ್ಲೇ ಭಾರತದ ಪ್ರತಿಕ್ರಿಯೆ ನೋಡಿದರೆ, ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಅಂದುಕೊಂ ಡಂತೆ ನಡೆಯಲಿದೆ ಎಂಬುದನ್ನು ಸೂಚಿಸಿದೆ ಎಂದು ಡಾನ್ ವರದಿ ಮಾಡಿದೆ. ಉರ್ದು ಪತ್ರಿಕೆಗಳು ಮಾತ್ರ, ತನಿಖೆಗೆ ಮೊದಲೇ ಪಾಕ್ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com