ನವದೆಹಲಿ: ಕೇರಳದ ಇಬ್ಬರು ಮೀನುಗಾರರ ಹತ್ಯೆ ಪ್ರಕರಣದಲ್ಲಿ ಒಬ್ಬನಾಗಿರುವ ಇಟಲಿ ನೌಕಾಪಡೆ ಸಿಬ್ಬಂದಿ ಮಸ್ಸಿಮಿಲಾನೋ ಲಾಟ್ಟೋರೆ ಭಾರತಕ್ಕೆ ಬರುವುದಿಲ್ಲ. ಹೀಗೆಂದು ಅಲ್ಲಿನ ಸಂಸತ್ನ ರಕ್ಷಣಾ ಇಲಾಖೆಯ ಮುಖ್ಯಸ್ಥರು ಮಂಗಳವಾರ ತಿಳಿಸಿದ್ದಾರೆ.
ಮೆದುಳಿಗೆ ಲಕ್ವ ಬಡಿದಿತ್ತು ಎಂಬ ಕಾರಣಕ್ಕಾಗಿ 2014ರಲ್ಲಿ ಸುಪ್ರೀಂಕೋರ್ಟ್ 4 ತಿಂಗಳ ಅವಧಿಗೆ ಮಸ್ಸಿಮಿಲಾನೋನನ್ನು ಸ್ವದೇಶಕ್ಕೆ ತೆರಳಲು ಅವಕಾಶ ಮಾಡಿಕೊಟ್ಟಿತ್ತು. ಇದಾದ ಬಳಿಕ ಆತ ಈ ಅವಧಿಯನ್ನು ವಿಸ್ತರಿಸುತ್ತಾ ಬಂದಿದ್ದ.
ಆರು ತಿಂಗಳ ವಿಸ್ತೃತ ಅವಧಿ ಮಂಗಳವಾರ ಮುಕ್ತಾಯವಾಗಿದೆ. ಅದಕ್ಕೆ ಪೂರಕವಾಗಿ ಬುಧವಾರ ಈ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ.