ಇಟಲಿ ನಾವಿಕ ಭಾರತಕ್ಕೆ ಬರಲ್ಲ

ಕೇರಳದ ಇಬ್ಬರು ಮೀನುಗಾರರ ಹತ್ಯೆ ಪ್ರಕರಣದಲ್ಲಿ ಒಬ್ಬನಾಗಿರುವ ಇಟಲಿ ನೌಕಾಪಡೆ ಸಿಬ್ಬಂದಿ ಮಸ್ಸಿಮಿಲಾನೋ ಲಾಟ್ಟೋರೆ...
ಮಸ್ಸಿಮಿಲಿಯಾನೋ ಲಟ್ಟೋರ್ & ಸಲ್ವಟ್ಟೋರ್ ಗಿರೋನ್
ಮಸ್ಸಿಮಿಲಿಯಾನೋ ಲಟ್ಟೋರ್ & ಸಲ್ವಟ್ಟೋರ್ ಗಿರೋನ್
ನವದೆಹಲಿ: ಕೇರಳದ ಇಬ್ಬರು ಮೀನುಗಾರರ ಹತ್ಯೆ ಪ್ರಕರಣದಲ್ಲಿ ಒಬ್ಬನಾಗಿರುವ ಇಟಲಿ ನೌಕಾಪಡೆ ಸಿಬ್ಬಂದಿ ಮಸ್ಸಿಮಿಲಾನೋ ಲಾಟ್ಟೋರೆ ಭಾರತಕ್ಕೆ ಬರುವುದಿಲ್ಲ. ಹೀಗೆಂದು ಅಲ್ಲಿನ ಸಂಸತ್‍ನ ರಕ್ಷಣಾ ಇಲಾಖೆಯ ಮುಖ್ಯಸ್ಥರು ಮಂಗಳವಾರ ತಿಳಿಸಿದ್ದಾರೆ. 
ಮೆದುಳಿಗೆ ಲಕ್ವ ಬಡಿದಿತ್ತು ಎಂಬ ಕಾರಣಕ್ಕಾಗಿ 2014ರಲ್ಲಿ ಸುಪ್ರೀಂಕೋರ್ಟ್ 4 ತಿಂಗಳ ಅವಧಿಗೆ ಮಸ್ಸಿಮಿಲಾನೋನನ್ನು ಸ್ವದೇಶಕ್ಕೆ ತೆರಳಲು ಅವಕಾಶ ಮಾಡಿಕೊಟ್ಟಿತ್ತು. ಇದಾದ ಬಳಿಕ ಆತ ಈ ಅವಧಿಯನ್ನು ವಿಸ್ತರಿಸುತ್ತಾ ಬಂದಿದ್ದ. 
ಆರು ತಿಂಗಳ ವಿಸ್ತೃತ ಅವಧಿ ಮಂಗಳವಾರ ಮುಕ್ತಾಯವಾಗಿದೆ. ಅದಕ್ಕೆ ಪೂರಕವಾಗಿ ಬುಧವಾರ ಈ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com