ದರ್ಗಾಗೆ ಭೇಟಿ ನೀಡುವವರಿಗೆ ಅವರಲ್ಲಿರುವ ಕಷ್ಟಗಳನ್ನು ಮೇಲ್ವಿಚಾರಕರು ದೂರ ಮಾಡುತ್ತಾರೆ. ಆದರೆ, ಈ ಘಟನೆಯಲ್ಲಿ ಮೇಲ್ವಿಚಾರಕರೇ ರೋಗಿಗಳಿಗೆ ಔಷಧಿಗಳನ್ನು ನೀಡಿ ಹತ್ಯೆ ಮಾಡಿದ್ದಾರೆ. ಗಾಯಾಳುವೊಬ್ಬರು ಘಟನೆ ಕುರಿತಂತೆ ಹೇಳಿಕೆಯೊಂದನ್ನು ನೀಡಿದ್ದು, ಮೇಲ್ವಿಚಾರಕರ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ವೇಳೆ ಮೇಲ್ವಿಚಾರಕರು ಮಾರಾಕಾಸ್ತ್ರಗಳಿಂದ ರೋಗಿಗಳ ಮೇಲೆ ದಾಳಿ ಮಾಡಿದರು ಎಂದು ಹೇಳಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ಬಿಲಾಲ್ ಇಫ್ತಿಖಾರ್ ತಿಳಿಸಿದ್ದಾರೆ.