ಢಾಕಾದಿಂದ ಎ ಎನ್ ಐ ಸುದ್ದಿಸಂಸ್ಥೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬಾಂಗ್ಲಾದೇಶ ಮಾಹಿತಿ ಮತ್ತು ಪ್ರಸಾರ ಸಚಿವ ಹಸನುಲ್ ಹಕ್ ಇನು "ಅಸ್ಸಾಂನ ರಾಜ್ಯದಲ್ಲಿ ಶತಮಾನದಷ್ಟು ಹಳೆಯ ಜನಾಂಗೀಯ ಸಂಘರ್ಷ ಇರುವುದು ಎಲ್ಲರಿಗೆ ತಿಳಿದ ವಿಚಾರವಾಗಿದೆ.ಳೆದ 48 ವರ್ಷಗಳಲ್ಲಿ ಯಾವುದೇ ಭಾರತೀಯ ಸರ್ಕಾರವು ಸಹ ಬಾಂಗ್ಲಾದೇಶದೊಡನೆ ಈ ಅಕ್ರಮ ವಲಸಿಗರ ಕುರಿತ ಸಮಸ್ಯೆಯನ್ನು ಮುನ್ನೆಲೆಗೆ ತಂದಿಲ್ಲ. ದೆಹಲಿಯ ನರೇಂದ್ರ ಮೋದಿ ಸರ್ಕಾರ ಈ ಸಮಸ್ಯೆಯನ್ನು ನ್ಯಾಯೋಚಿತವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದೆ.ಹೀಗಾಗಿ ಇದಕ್ಕೂ ಬಾಂಗ್ಲಾದೇಶಕ್ಕೂ ಯಾವ ಸಂಬಂಧವಿಲ್ಲ" ಎಂದಿದ್ದಾರೆ.