ಕುಟುಂಬದವರೊಂದಿಗೆ ಪ್ರಪಂಚ ಸುತ್ತುವ ಆಸೆ ಇದ್ದು ಈಗ ಅದಕ್ಕೆ ಕಾಲ ಕೂಡಿಬಂದಿದೆ ಎನ್ನುತ್ತಾರೆ ಲಾಟರಿ ಬಹುಮಾನ ಗೆದ್ದಿರುವ ಹರಿಕೃಷ್ಣನ್, ವಿಶ್ವ ಸುತ್ತುವ ಆಸೆಯ ಜೊತೆಗೆ ಸಮಾಜಕ್ಕಾಗಿ ಹಣವನ್ನು ವಿನಿಯೋಗಿಸುವುದೂ ಸಹ ಹರಿಕೃಷ್ಣನ್ ಅವರ ಆದ್ಯತೆಯ ಪಟ್ಟಿಯಲ್ಲಿದ್ದು, ಭಾರತದಲ್ಲಿ ಹೊಸ ಮನೆ ಖರೀದಿಸುವುದು ಹಾಗೂ ಮಗನ ವಿದ್ಯಾಭ್ಯಾಸಕ್ಕೆ ಹಣ ಮೀಸಲಿಡುವುದಾಗಿ ಹರಿಕೃಷ್ಣನ್ ತಿಳಿಸಿದ್ದಾರೆ.