ಹೌದು, ನಾವು ತಪ್ಪಿ ಮಾಡಿದ್ದೇವೆ. ನಾವೂ ಕೂಡ ಮನುಷ್ಯರೇ. ನಾವೂ ಕೂಡ ತಪ್ಪು ಮಾಡುತ್ತೇವೆ. ಆದರೆ, ಮತ್ತೆ ಹೊಸ ದೃಷ್ಟಿಯೊಂದಿಗೆ ಹೊಸ ಕಾಂಗ್ರೆಸ್ ಪಕ್ಷವನ್ನು ಹೊರತರುತ್ತೇವೆ. ಅಂತರವಿದೆ ಎಂದು ನೀವು ಹೇಳುತ್ತೀರಿ. ಹೌದು ಮಾಧ್ಯಮಗಳ ನಡುವೆ ಅಂತರವಿದೆ. ಮಾಧ್ಯಮಗಳಲ್ಲಿ ಏಕಪಕ್ಷೀಯವಾಗಿ ಪ್ರಚಾರಗಳು ನಡೆಯುತ್ತಿವೆ. ಆದರೆ, ನಾವು ಈ ಎಲ್ಲದರ ವಿರುದ್ಧ ನಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದಾವೆ. ಗುಜರಾತ್ ರಾಜ್ಯ ಬಿಜೆಪಿಯವರ ಭದ್ರಕೋಟೆಯಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಅಂತರಗಳಲ್ಲಿ ಸೋಲಿನಿಂದ ತಪ್ಪಿಸಿಕೊಂಡಿದೆ.