ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ, ಮುಸ್ಲಿಮರು ಜಿಹಾದ್ ಹಾದಿಯನ್ನು ಅನುಸರಿಸಬೇಕು. ಭಾರತ ಮಿನಿ ಸೂಪರ್ ಪವರ್ ದೇಶವಾಗಿದ್ದು, ಕಳೆದ 60 ವರ್ಷಗಳಿಂದಲೂ ಪಾಕಿಸ್ತಾನಕ್ಕೆ ತೊಂದರೆಯನ್ನು ಕೊಡುತ್ತಲೇ ಇದೆ. ಆದರೆ, ಕಾಶ್ಮೀರದಲ್ಲಿ ಭಾರತದ 6 ಲಕ್ಷ ಯೋಧರು ಸಾಕಷ್ಟು ಶ್ರಮಪಡುತ್ತಿದ್ದರು, ಕಾಶ್ಮೀರದಲ್ಲಿ ಗೆಲವು ಸಾಧಿಸಲು ಸಾಧ್ಯವಾಗುತ್ತಿಲ್ಲ. 2016 ಜನವರಿ ತಿಂಗಳಲ್ಲಿ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ದಾಳಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಹಾಗೂ ವಿವಿಧ ರಾಜ್ಯಗಳ ಗಡಿಯಲ್ಲಿ ನಡೆದ ಸಾಕಷ್ಟು ದಾಳಿಗಳನ್ನು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯೇ ನಡೆಸಿತ್ತು.